ಸೂಲದಹಳ್ಳಿಯಲ್ಲಿ ಪೆಟ್ರೋಲಿಯಂ ರಿಟೈಲ್ಜೌಟಲೇಟ್ ಸ್ಥಾಪನೆ: ಆಕ್ಷೇಪಣೆಗೆ ಅವಕಾಶ

Loading

ಹೊಸಪೇಟೆ (ವಿಜಯನಗರ) : ಟೆರಿಟರಿ ಮ್ಯಾನೇಜರ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಲಬುರಗಿ (Territory Manager, Bharat Petroleum Corporation Limited, Kalaburgi) ಇವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಸೂಲದಹಳ್ಳಿ (ಗುಣಸಾಗರ) ಗ್ರಾಮದ ಸರ್ವೆ ನಂಬರ್ 239/2 ಮತ್ತು 240/2 ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿರುತ್ತಾರೆ.

ಈ ಕಂಪನಿಯವರು ಅರ್ಜಿದಾರರಾದ ಶ್ರೀ ಅವಿನಾಶ್ ಕೃಷ್ಣ ತಂದೆ ಹೆಚ್ ಕೃಷ್ಣಪ್ಪ ಇವರನ್ನು ಫ್ರಾಂಚೈಸ್ಸಿಯನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಸೂಲದಹಳ್ಳಿ (ಗುಣಸಾಗರ) ಗ್ರಾಮದ ಸರ್ವೆ ನಂಬರ್ 239/2 ಮತ್ತು 240/2 ರಲ್ಲಿ ಪೆಟ್ರೋಲಿಯಂ ರಿಟೈಲ್ ಜೌಟಲೇಟ್ ಸ್ಥಾಪನೆ ಮಾಡಲು ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿAದ ಒಂದು ವಾರದೊಳಗಾಗಿ ಆಕ್ಷೇಪಣೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ: vijayanagaradc@gmail.comಗೆ ವಿಜಯನಗರ ಜಿಲ್ಲೆ ಹೊಸಪೇಟೆ ಹಾಗೂ ನೇರವಾಗಿ ಈ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಸಾರ್ವಜನಿಕರಲ್ಲಿ ತಿಳಿಯಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *