
ಹೊಸಪೇಟೆ : 2023ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಡೊಳ್ಳು ಕಲಾವಿದರಾದ ಶ್ರೀ ಕಾರಮಂಚಪ್ಪ ಹೊಸಕುರುಬ ಇವರಿಗೆ ಈ ಬಾರಿಯ ಪ್ರಶಸ್ತಿ ಸಂದಿದೆ.
ಶ್ರೀ ಕಾರಮಂಚಪ್ಪನವರಿಗೆ ಈಗ 75 ವರ್ಷ. ಅಪ್ಪ-ಅಜ್ಜ-ಮುತ್ತಜ್ಜನವರ ಕಾಲದಿಂದಲೂ ಬಂದ ಡೊಳ್ಳು ತಯಾರಿಕೆ, ಡೊಳ್ಳು ಕುಣಿತ, ಡೊಳ್ಳಿನ ಹಾಡುಗಾರಿಕೆ, ಕಂಬಳಿ ತಯಾರಿಕೆಯನ್ನು ಉಳಿಸಿಕೊಂಡು ಬಂದ ಮನೆತನವಿದು. ಹಲವು ಕಡೆ ಈ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.
ಈಗ ಅವರ ಮಕ್ಕಳಾದ ಶ್ರೀ ಪ್ರಕಾಶ ಮತ್ತವರ ಸಹೋದರರು ಹಾಗೂ ಮೊಮ್ಮಕ್ಕಳು ಡೊಳ್ಳು ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಶ್ರೀಯುತರ ಜಾನಪದ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರವು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿ ಪ್ರಶಸ್ತಿಗೆ ಬಾಜನರಾಗಿದ್ದಾರೆ.