
ಗಂಗಾವತಿ : ದಿನಾಂಕ 15/ 10/2023 ರಿಂದ 24/10/2023 ರವರೆಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಶರನ್ನವರಾತ್ರಿ ಅಂಗವಾಗಿ ದೇವಿಯ ಪುರಾಣ ಪ್ರವಚನದಲ್ಲಿ ಡಾ.ತಿಮ್ಮಣ್ಣ ಭೀಮರಾಯ ತಾ.ಸಂಗೀತ ಅಧ್ಯಾಪಕರು ಸಂಗೀತ ಮತ್ತು ನೃತ್ಯ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಸಂಗೀತ ಗಾಯನ ಹರಿಸುವ ಮೂಲಕ ಊರಿನ ಸರ್ವ ಸದ್ಭಕ್ತರ ಪ್ರೀತಿಗೆ ಪಾತ್ರರಾಗಿರುವುದರಿಂದ, ದಸರಾ ಮಹೋತ್ಸವದ ಶ್ರೀ ದುರ್ಗಾ ಪರಮೇಶ್ವರಿ ಮಹಾ ಪುರಾಣ ಮಂಗಲದ ಅಂಗವಾಗಿ ದಾಸನಾಳ ಗ್ರಾಮದ ಗುರು – ಹಿರಿಯರು ,ಸಮಸ್ತ ಭಕ್ತ ಬಳಗದವರಿಂದ ಮತ್ತು ಶ್ರೀ ದುರ್ಗಾಂಬಾ ದೇವಿ ಕ್ಷೇಮಾಭಿವೃದ್ಧಿ ಸಂಘ (ರಿ) ದಾಸನಾಳ ಗ್ರಾಮದ ಎಲ್ಲ ಪದಾಧಿಕಾರಿಗಳಿಂದ ಗೌರವದೊಂದಿಗೆ “ಗಾನ ಕೋಗಿಲೆ ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.