
ಹಗರಿಬೊಮ್ಮನಹಳ್ಳಿ: ಭಾರೀ ಶಬ್ಧ ಮಾಡುವ ‘ಡಿಜೆ’ ಗೆ ಸುತರಾಂ ಅವಕಾಶ ಇಲ್ಲಾ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾತ್ರಿ ಹತ್ತು ಗಂಟೆ ವರೆಗೆ ಅನುಮತಿ. ಬಂಟಿಂಗ್ಸ್, ಬ್ಯಾನರ್ ಕಟ್ಟುವುದಕ್ಕೆ ನಿಷೇಧ. ವಿದ್ಯುತ್ ಸಂಪರ್ಕದ ಪರವಾನಿಗೆ, ಮೈಕ್ ಲೈಸೆನ್ಸ್ ಕಡ್ಡಾಯ. ಇಸ್ಪೀಟು, ಜೂಜಾಟದಂತಹ ಕಾನೂನು ಬಾಹಿರವಾದ ಚಟುವಟಿಕೆ ಕಂಡು ಬಂದರೇ ಸೂಕ್ತ ಕ್ರಮ ಜರಗಿಸಲಾಗುವುದು.
ಗಣಪತಿ ಹಬ್ಬದ ಶಾಂತಿಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಲ್.ಹರಿಬಾಬು ಅವರು ಇತಿಹಾಸದಲ್ಲಿ ಇದೇ ಮೊದಲ ಸಲ. ಕಾರ್ಯನಿಮಿತ್ತ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಿಗೆ ಎಸ್ಪಿ ಅವರು ಭೇಟಿ ನೀಡಿದ್ದರು. ಅನಿರೀಕ್ಷಿತವಾಗಿ ಇಲ್ಲಿನ ಶಾಂತಿಸಭೆಗೆ ಆಗಮಿಸುವ ಮೂಲಕ ಶಾಂತಿ ಸಭೆಯಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದರು. ಇತ್ತಿಚಿನ ವರ್ಷಗಳಲ್ಲಿ ಶಾಂತಿ ಸಭೆಗೆ ದೊಡ್ಡ ಸಂಖ್ಯೆಯಲ್ಲಿ ನಾಗರೀಕರು ಬಂದಿದ್ದು ಇದೇ ಮೊದಲ ಸಲ.ಪಟ್ಟಣ ಸೇರಿದಂತೆ ಈ ಠಾಣೆ ವ್ಯಾಪ್ತಿಗೆ ಸೇರುವ ಗ್ರಾಮಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ,ಸಂಸ್ಥೆಗಳನ್ನು ಪ್ರತಿನಿಧಿಸಿ ಮುಖಂಡರು ಸೇರಿದ್ದರು.
ಹಗರಿಬೊಮ್ಮನಹಳ್ಳಿ ವೃತ್ತದ ಸಿಪಿಐ ವಿಕಾಶ್ ಲಮಾಣಿ ಪ್ರಸ್ತಾವಿಕವಾಗಿ ಮಾತನಾಡಿದರು.ಮತ್ತು
2005ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ರಾತ್ರಿ ಹತ್ತು ಗಂಟೆಗೆಲ್ಲ ಕಾರ್ಯಕ್ರಮ ಮುಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಹೆಚ್ಚುವರಿ ಸಮಯ ನೀಡಲು ಆಗುವುದಿಲ್ಲ ಎಂದು ಎಸ್ಪಿ ಹರಿಬಾಬು ತಿಳಿ ಹೇಳಿದರು.
ಸಭೆಯಲ್ಲಿ ಮಾತನಾಡಿದವರು ವ್ಯಕ್ತಪಡಿಸಿದ ಅನಿಸಿಕೆ, ಅಭಿಪ್ರಾಯಗಳನ್ನು ಎಸ್ಪಿ ಅವರು ನೋಟ್ ಮಾಡಿಕೊಂಡು, ಎಲ್ಲರ ಮಾತುಗಳನ್ನು ಗಂಭೀರವಾಗಿ ಕೇಳುವ ಮೂಲಕ ಶಾಂತಿ ಸಭೆಯ ಘನತೆಯನ್ನು ಹೆಚ್ಚಿಸಿದರು.
ಭಕ್ತಿಗಾಗಿ ಗಣಪತಿ ಕೂಡಿಸುವರ ಸಂಖ್ಯೆ ಹೆಚ್ಚು. ಆದರೇ ಇಸ್ಪೀಟು, ಜೂಜಾಟ ಆಡುವ ಸಲುವಾಗಿಯೇ ಒಂದಿಷ್ಟು ಮಂದಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾರೆ. ಇಂತಹವರ ಮೇಲೆ ಇಲಾಖೆ ನಿಗಾ ಇಟ್ಟಿರುತ್ತೆ. ಹಬ್ಬದ ಹೆಸರಿನಲ್ಲಿ ಕಾನೂನು ಬಾಹಿರವಾದ ಚಟುವಟಿಕೆಗಳು ಕಂಡು ಬಂದರೇ ನಮ್ಮ ಪೊಲೀಸರು ಮುಲಾಜಿಲ್ಲದೆ ಕ್ರಮವಹಿಸುತ್ತಾರೆ. ಇದಕ್ಕೆ ಅಸ್ಪದ ಮಾಡಿಕೊಡದಂತೆ ಹಬ್ಬದಾಚರಣೆ ಮಾಡುವಂತೆ ಎಸ್ಪಿ ಹರಿಬಾಬು ಸಭೆಯಲ್ಲಿ ಹಾಜರಿದ್ದ ಗಣಪತಿ ಕೂಡಿಸುವ ಸಂಘಟನೆಯ ಮುಖಸ್ಥರಿಗೆ ತಿಳಿ ಹೇಳಿದರು.
ಗಣಪತಿ ಕೂಡಿಸುವರು ಪೊಲೀಸ್, ಕಂದಾಯ, ಸ್ಥಳಿಯಾಡಳಿತ, ಜೆಸ್ಕಾಂ, ಅಗ್ನಿಶಾಮಕ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ಹತ್ತು ಜನರ ಹೆಸರನ್ನು ನೀಡಬೇಕು. ಗಣಪತಿ ಕೂಡಿಸುವ ಸ್ಥಳದಲ್ಲಿ ಸಿಸಿ ಕ್ಯಾಮರ್ ಅಳವಡಿಸಬೇಕು. ನಿಗದಿತ ಮಾರ್ಗದಲ್ಲಿ ಮೆರವಣಿಗೆ, ನಿಗದಿತ ಸಮಯದಲ್ಲಿಯೇ ಅದಷ್ಟು ಹಗಲಿನ ವೇಳೆಯಲ್ಲಿಯೇ ವಿಸರ್ಜನೆ ಮಾಡುವುದು ಸೂಕ್ತ ಎಂದರು.
ಭಾರೀ ಸೌಂಡಿನ ಡಿಜೆಗೆ ಅವಕಾಶ ಇಲ್ಲ, ಸುಪ್ರೀಂ ಕೋರ್ಟ್ ನಿಗದಿ ಪಡಿಸಿರುವ ಡಿಸಿಬಲ್ ಸಾಮರ್ಥ್ಯದ ಸೌಂಡ್ಸ್ ಗಷ್ಟೆ ಅವಕಾಶ. ಇದು ಇಡೀ ಜಿಲ್ಲೆಗೆ ಅನ್ವಯ. ಗಣಪತಿ ಪ್ರತಿಷ್ಠಾಪನೆ ವಿಚಾರಕ್ಕೆ ಅಗತ್ಯ ಇರುವ ಪರವಾನಿಗೆ ಪಡೆದುಕೊಳ್ಳಲು ಸಂಬಂಧಿಸಿದ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಸಂಘಟಕರು ಕಚೇರಿ ಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗುವುದೆಂದು ಸಂಘಟಕರಿಗೆ ಭರವಸೆ ನೀಡಿದರು. ಹಾಜರಿದ್ದವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು.
ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ಎಂ.,
ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ನಾಣಿಕೆರಿ ದೈವಸ್ಥರ ಮುಖಂಡ ಬಾರಿಕರ ಬಾಪೂಜಿ, ಪುರಸಭಾ ಸದಸ್ಯರಾದ ಮರಿ ರಾಮಪ್ಪ, ಪವಾಡಿ ಹನುಮಂತಪ್ಪ, ಜೋಗಿ ಹನುಮಂತಪ್ಪ, ಶ್ರೀ ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹೆಚ್.ಪಿ.ಶಿವಶಂಕರಗೌಡ, ಸದಸ್ಯ ಪಂಬ್ಲರ್ ಮಾರುತಿ, ದುರ್ಗಾ ಗರಡಿ ಗೆಳೆಯರ ಬಳಗದ ಸೆರೆಗಾರ ಹುಚ್ಚಪ್ಪ, ಮುಸ್ಲಿಂ ಮುಖಂಡರಾದ ತತ್ತಿ ಖಾಸೀಂ, ಸಾಹುಲ್, ಕೆಜಿಎನ್ ಅಲ್ಲಾಭಕ್ಷ್, ಯಮನೂರ್, ಎಣ್ಣಿ ದಾದಖಲಂದರ್, ಶಾಮಿಯಾನ ಸಂಘದ ಪವಾಡಿ ಮಂಜುನಾಥ, ಹಿಂದೂ ಮಹಾ ಗಣಪತಿ ಮುಖಂಡರಾದ ಪೂಜಾರ್ ಆನಂದ್, ಪರುಶುರಾಮ, ಪಟ್ಟಣ ಹಾಗೂ ಠಾಣಾ ವ್ಯಾಪ್ತಿಯ ಗ್ರಾಮಗಳ ಗಣಪತಿ ಕೂಡಿಸುವ ಸಂಘ, ಸಂಸ್ಥೆಯ ಪ್ರತಿನಿಧಿಗಳು, ಕಂದಾಯ, ತಾಪಂ, ಪುರಸಭೆ, ಜೆಸ್ಕಾಂ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಿಪಿಐ ವಿಕಾಶ್ ಲಮಾಣಿ ಪ್ರಸ್ತಾವಿಕ ಮಾತನಾಡಿದರು.ಪಿಎಸ್ಐ ಸರಳಾ ಸ್ವಾಗತಿಸಿದರು. ಎಎಸ್ಐ ವೆಂಕಟೇಶ, ಯಮುನನಾಯ್ಕ್ ವಂದಿಸಿದರು.