
ಕೊಪ್ಪಳ : ಶ್ರೀ ಗಾಲಿ ಜನಾರ್ದನ್ ರೆಡ್ಡಿ ಯವರು ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮ ದಲ್ಲಿರುವ ಶ್ರೀ ವಾಣಿಭದ್ರೇಶ್ವರ ದೇವಾಲಯದ ಶಿವಲಿಂಗ ಪ್ರತಿಷ್ಠಾಪನ ಕಾರ್ಯಕ್ರಮ ದಲ್ಲಿ ಭಾಗಿಯಾದರು ಈ ಸ್ಥಳವು ಪುರಾಣದಲ್ಲಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರು ಪಗಡೆ ಆಟ ಆಡುವಾಗ ಅವರಿಬ್ಬರ ಮಧ್ಯೆ ವಾಗ್ವಾದಗಳು ನಡೆದು, ಶಿವನು ಪಾರ್ವತಿಯನ್ನು ತ್ಯಜಿಸಿ, ಪಂಪಾಕ್ಷೇತ್ರದ ಉತ್ತರದಲ್ಲಿರುವ ಒಂದು ಗಿರಿಗೆ ಬಂದು ತಪಸ್ಸಿಗೆ ಕುಳಿತನು. ಪಾರ್ವತಿ ಸರ್ವಮಂಗಲೆ ಎಂಬ ಹೆಸರಿನಿಂದ ಶಿವನನ್ನು ಮೋಹಗೊಳಿಸಿ ಮಾಯವಾಗುತ್ತಾಳೆ. ಇದರಿಂದ ಶಿವನ ಕೋಪ ಮತ್ತಷ್ಟು ಹೆಚ್ಚಾಗಿದ್ದರಿಂದ, ಭಯಬೀತರಾದ ಸರ್ವದೇವತೆಗಳು ಮತ್ತು ಋಷಿಗಳು ಶಿವನನ್ನು ಕುರಿತು ಪ್ರಾರ್ಥನೆ ಮಾಡಿದರು. ಅವರ ಪ್ರಾರ್ಥನೆಯಿಂದ ಶಾಂತನಾದ ಶಿವನು ಸಕಲ ಸುಖವನ್ನುಂಟು ಮಾಡುವ ವಾಣಿಭದ್ರೇಶ್ವರ ಎಂಬ ಹೆಸರಿನಿಂದ ತಪಸ್ಸಿಗೆ ಕುಳಿತು, ಪಂಪಾಕ್ಷೇತ್ರದ ಉತ್ತರ ದ್ವಾರದಲ್ಲಿ ನೆಲೆಸಿರುವನು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಇಂತಹ ಐತಿಹಾಸಿಕ ಪರಂಪರೆವುಳ್ಳ ಶಿವಲಿಂಗವನ್ನು ಇತ್ತೀಚಿಗೆ ಕೆಲವು ಕಿಡಿಗೇಡಿಗಳು ಭಗ್ನಗೊಳಿಸಿದ್ದರು. ಇಂದು ಶಿವಲಿಂಗ ಪ್ರತಿಷ್ಠಾಪನ ಕಾರ್ಯಕ್ರಮದ ನಂತರ ಹೆಬ್ಬಾಳ ಮಠ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಗಳು, ಶ್ರೀ ಸಿದ್ದರಾಮ ಸ್ವಾಮೀಜಿಗಳು ಹಾಗೂ ಸ್ಥಳೀಯ ಪ್ರಮುಖರ ಜೊತೆ ದೇವಸ್ಥಾನದ ಅಭಿವೃದ್ಧಿ ಮತ್ತು ಕಾಮಗಾರಿ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರುಗಳು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.