ಹಗರಿಬೊಮ್ಮನಹಳ್ಳಿ :ದಿನಾಂಕ ಆಗಸ್ಟ್ 10 2023ರ ಬೆಳಗ್ಗೆ 10-00 ಗಂಟೆಗೆ ಸ್ಥಳ ಗಂಗಾವತಿ ಭೀಮಪ್ಪ ಪದವಿ ಪೂರ್ವ ಕಾಲೇಜು ಆವರಣ. ಹಗರಿಬೊಮ್ಮನಹಳ್ಳಿ ಯಲ್ಲಿ ಆಯೋಜನೆ ಯನ್ನು ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಗಣ್ಯರು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಯ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಪಿ.ಸರಳ ಅವರು ಮಾತನಾಡಿ ಇಂದಿನ ಯುವಕರು ವಾಹನ ಪರವಾನಿಗೆ ಇಲ್ಲದೆ ವಾಹನ ಚಲಾವಣೆ ಮಾಡುತ್ತಿದ್ದು ಕಂಡುಬಂದಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ದಂಡ ತೆರಬೇಕಾಗುತ್ತದೆ ಮತ್ತು ತಮ್ಮ ಜೀವದ ಮೌಲ್ಯವನ್ನು ತಿಳಿದುಕೊಂಡು ವಾಹನ ಚಲಾವಣೆ ಮಾಡಬೇಕು. ಹೆಲ್ಮೆಟ್ ಧರಿಸುವಿಕೆ ಹಾಗೂ ಕೆಲ ಸಂಚಾರಿ ನಿಯಮಗಳನ್ನು ಸಾರ್ವಜನಿಕರಲ್ಲಿ ಪ್ರಸ್ತುತಪಡಿಸಿದರು,
ಪದ್ಮ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಮಾತಾ ಮಂಜಮ್ಮ ಜೋಗಿ ಅವರು ಮಾತನಾಡಿ ಸಂಚಾರಿ ನಿಯಮಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ತಾವು ಇತ್ತೀಚಿಗೆ ವಾಹನ ಚಲಾವಣೆ ಪರವಾನಿಗೆಯನ್ನು ಪಡೆದದ್ದು ವಿಷಯವನ್ನು ಸಾರ್ವಜನಿಕವಾಗಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಸಾವಿಸ್ತಾರವಾದ ಮಾಹಿತಿಯನ್ನು ನೀಡಿದರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ತದನಂತರ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ ಮಾತ ಮಂಜಮ್ಮ ಜೋಗತಿ. ಶಂಭುಲಿಂಗ ಶಿವಾಚಾರ್ಯರು.ಹಾಲಸಿದ್ದೇಶ್ವರ ಶ್ರೀಗಳು.ಆರ್ ಟಿ ಓ ಮಂಜುನಾಥ್ ಸರ್. ಗುರು ಚರಂತೆಶ್ವರ ಶ್ರೀಗಳು. ಹಗರಿಬೊಮ್ಮನಹಳ್ಳಿಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಪಿ.ಸರಳ ಅವರು ಎಸ್ ಎಸ್ ಕುಮಾರ್ ಆರ್ ಟಿ ಓ ಹಾಗೂ ತಾಲೂಕಿನ ಆಟೋ ಚಾಲಕರ ಸಂಘ. ಕೆಲ ಇನ್ಸೂರೆನ್ಸ್ ಕಂಪನಿ ಮತ್ತು ಡ್ರೈವಿಂಗ್ ಸ್ಕೂಲ್ ಗಳು ಉಪಸ್ಥಿತರಿದ್ದಾರೆ,

