ಬಣಜಿಗ ಸಮುದಾಯ ಸ್ವಾಭಿಮಾನದಿಂದ ಮತ್ತು ಸ್ವಂತ ಶಕ್ತಿಯಿಂದ ಬದುಕುತ್ತಿದೆ. ಈ ರಾಜ್ಯಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಬಣಜಿಗ ಸಮುದಾಯಕ್ಕೆ ಸಲ್ಲುತ್ತದೆ : ಸಚಿವ ಶಿವರಾಜ್ ತಂಗಡಗಿ.

Loading

ಕಾರಟಗಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾರಟಗಿ ಪಟ್ಟಣದ ಪದ್ಮಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಬಣಜಿಗ ಸಮುದಾಯದಿಂದ ಎಸ್ ಎಸ್ ಎಲ್ ಸಿ.ಹಾಗೂ ಪಿಯುಸಿ ಪರೀಕ್ಷೆ ಯಲ್ಲಿ ೮೫ ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು ಬಣಜಿಗ ಸಮುದಾಯ ಸ್ವಾಭಿಮಾನದಿಂದ ಮತ್ತು ಸ್ವಂತ ಶಕ್ತಿಯಿಂದ ಬದುಕುತ್ತಿದೆ. ಈ ರಾಜ್ಯಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಬಣಜಿಗ ಸಮುದಾಯದ್ದಾಗಿದ್ದು, ಮಠ ಮಾನ್ಯದಿಂದ ಹಿಡಿದು ಯಾವುದೇ ಕ್ಷೇತ್ರದಲ್ಲಿ ಲೆಕ್ಕ ಇಟ್ಟವರು ಈ ಸಮಾಜ. ಪ್ರತಿಯೊಬ್ಬರು ನಿಮ್ಮ ಸಮಾಜದ ಬಗ್ಗೆ ಅಪಾರ ನಂಬಿಕೆ, ವಿಶ್ವಾಸವಿಟ್ಟಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಕೊಂಡಾಡಿದರು.


ಪ್ರತಿಯೊಂದು ಸಮುದಾಯದ ಸಂಘಟನೆ ಜತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಮುಖ್ಯ. ಆ ನಿಟ್ಟಿನಲ್ಲಿ ಬಣಜಿಗ ಸಮಾಜ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ‌ ಹಮ್ಮಿಕೊಂಡಿರುವುದು.ಇದೊಂದು ಒಳ್ಳೆಯ ಕಾರ್ಯಕ್ರಮ ಮತ್ತು ಶಿಕ್ಷಣದಿಂದ ಸಮಾಜ ಪ್ರಗತಿಯತ್ತ ಸಾಗುತ್ತದೆ. ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ‌ ಉತ್ಸಾಹ ಪ್ರೋತ್ಸಾಹ ದೊರಕಿದಂತಾಗುತ್ತದೆ.ಕಾರಟಗಿ ತಾಲುಕಿಗೆ ಬಣಜಿಗ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ:ಅನುದಾನ ನೀಡುವುದಾಗಿ
ಸಮುದಾಯದ ಕಾರ್ಯಕ್ರಮ ಮಾಡಲು ಒಂದು ಸಿಎ ನಿವೇಶನ‌ ಅಗತ್ಯವಿದೆ ಎಂದು ಬಣಜಿಗ ಸಮುದಾಯದ ಯುವಮುಖಂಡರು ಮಾಡಿದ ಮನವಿಗೆ ಕೂಡಲೇ ಸ್ಪಂದಿಸಿದ ಸಚಿವರು, ಮುನ್ಸಿಪಾಲಿಟಿಯಲ್ಲಿ ಸಿಎ ನಿವೇಶನ‌ ಕೊಡಿಸಲಾಗುವುದು.

ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾ‌ನ ಕಲ್ಪಿಸಲಾಗುವುದು ,ಮತ್ತು ನಮ್ಮ ಕ್ಷೇತ್ರದಲ್ಲಿನ ಪ್ರತಿಯೊಂದು ಸಣ್ಣ ಪುಟ್ಟ ಸಮುದಾಯಕ್ಕೂ ಕಾರ್ಯಕ್ರಮ‌ ಹಾಗೂ ಆಯಾ ಸಮುದಾಯದ ಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಿನ‌ ದಿನಗಳಲ್ಲಿ ಶ್ರಮಿಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಅವಿನಾಶ್ ಮಮದಾಪೂರ ಹಾಗೂ ಸಹಾಯಕ ಪ್ರಾಧ್ಯಾಪಕ ಸಂಗೀತಾ ಪಟ್ಟಣಶೆಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು.


ಬಳಿಕ ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಚಿವ ಶಿವರಾಜ ತಂಗಡಗಿಯವರಿಗೆ ಬಣಜಿಗ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಮುದಾಯದ ಕಾರಟಗಿ ತಾಲೂಕಿನ ಅಧ್ಯಕ್ಷ ವೀರೇಶಪ್ಪ ಚಿನಿವಾಲ, ನಾಗರಾಜ ಅರಳಿ, ಅಮರಗುಂಡಪ್ಪ ಕೋರಿ, ಶೋಭಾ ಸೋಮಲಾಪುರ, ಪಾರ್ವತಕ ಪವಾಡಶೆಟ್ಟರ್ ಹಾಗೂ ಸಮುದಾಯದ ಇನ್ನಿತರರು ಮುಖಂಡರು ಉಪಸ್ಥಿತರಿದ್ದರು.


ಕನಕಗಿರಿ ಕ್ಷೇತ್ರದಲ್ಲಿ ನಾನು ಅದೃಷ್ಟದ ರಾಜಕಾರಣಿಯಂತೆ ನಾನು ಪ್ರತಿ ಬಾರಿಯು ಜಯಗಳಿಸಿದರು ಮಂತ್ರಿಯಾಗಿದ್ದೇನೆ ಎಂದು ಹಲವರು ಹೇಳುವರು. ಆದರೆ ಪ್ರತಿಯೊಂದು ಸಮುದಾಯದ ಆಶೀರ್ವಾದದಿಂದ ಹಾಗೂ ಜನತೆ ನೀಡಿರುವ ಭಿಕ್ಷೆ ಈ ಸ್ಥಾನ ನನಗೆ ಒಲಿದು ಬಂದಿದೆ. ಪ್ರತಿ ಸಾರಿ ಕಡಿಮೆ ಅಂತರದಲ್ಲಿ‌ ಗೆಲುವು ನೀಡುತ್ತಿದ್ದ, ಜನತೆ ಈ ಬಾರಿ 43 ಸಾವಿರ ಅಂತರದ ಗೆಲ್ಲಿಸಿದ್ದಾರೆ. ನನ್ನ ಮೇಲೆ ಇಟ್ಟಿರುವ ಕನಕಗಿರಿ ಜನತೆಯ ವಿಶ್ವಾಸವನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುತ್ತೆನೆ ಎಂದರು.


ಕಾರಟಗಿ : ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಪದ್ಮಶ್ರೀ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಣಜಿಗ ಸಮುದಾಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿಯನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *