
ಹಗರಿ ಬೊಮ್ಮನಹಳ್ಳಿ : ಪಟ್ಟಣದ. ಶ್ರೀ ಗಾಳಿಯಮ್ಮ ದೇವಸ್ಥಾನದಲ್ಲಿ ದಿನಾಂಕ 3,4 ,5, ರಂದು ನೆಡೆದ ಜಾತ್ರಾ ಮಹೋತ್ಸವದ ಅಂಗವಾಗಿ. ಆಯಾ – ವ್ಯಯ ಖರ್ಚಿನ ಬಾಬತ್ತನ್ನು ಜೋಗಿ ಹನುಮಂತ ಓದಿದರು . ನಂತರ
ಈ ಸಂದರ್ಭದಲ್ಲಿ ಗಾಳೆಮ್ಮ ದೇವಿ ದೇವಾಸ್ಥಾನದ ಕಮಿಟಿ ಯ ಅಧ್ಯಕ್ಷ . ಸಿ .ಎಂ ರಾಮಣ್ಣ ಮಾತನಾಡಿ, ಯಾವುದೇ ರೀತಿಯ. ಗೊಂದಲ ಆಗದಂತೆ. ಸಹಕರಿಸಿದ. ನಾಗರಿಕರಿಗೂ, ಆರಕ್ಷಕ ಠಾಣೆ ಯವರು, ಜೆಸ್ಕಾಂ , ಇಲಾಖೆಯವರು, ಸುತ್ತ ಮುತ್ತಲಿನ ಭಕ್ತಾದಿಗಳು, ಹಾಗೂ ಎಲ್ಲಾ ರೀತಿಯ ಸಹಕಾರ ನೀಡಿ ದ್ದಕ್ಕಾಗಿ ಧನ್ಯ ವಾದಗಳನ್ನು ತಿಳಿಸಿದ್ದಾರೆ.

ಹಗೂ ದೇವಸ್ಥಾನದ ಪ್ರಧಾನ ಕಾರ್ಯ ದ ರ್ಶಿ ಬಂಗಾರಿ ಗಾಳಿರಾಜ ಸಹಾ ಮಾತನಾಡಿ ಸಾರ್ವಜನಿಕರಿಂದ ಸಂಗ್ರಹವಾದ ಮೊತ್ತ. ರೂ .9,88,346, ಒಟ್ಟು ಖರ್ಚಾದ ಮೊತ್ತ ,ರೂ .6,47,561. ಉಳಿತಾಯ ರೊ. 3,40,785. ಈ ಉಳಿತಾಯದ ಹಣವನ್ನು. ಶ್ರೀ ಗಾಳೆಮ್ಮ ದೇವಿಯ ದೇವಸ್ಥಾನದ ಜೀರ್ಣೋದ್ಧಾರ ಕ್ಕಾಗಿ ಮುಡುಪಾಗಿ ಇರುತ್ತೆ. ಇನ್ನು ಮುಂದೆ ಶ್ರೀಗಾಳೆಮ್ಮ ದೇವಿಯ ಜಾತ್ರೆಯನ್ನು. 5 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ನೇಮಿರಾಜ್ ನಾಯ್ಕ್ ಸಹಾ ಭೇಟಿ ನೀಡಿದ್ದು ವಿಶೇಷ.
ಈ ಕಾರ್ಯದಲ್ಲಿ ಪುರಸಭೆ ಸದಸ್ಯ ನವೀನ್ ಕುಮಾರ್, ಬಾರಿಕರ್ ನಿಂಗಪ್ಪ, ಕೃಷ್ಣ ಬಡ್ಲಡಕಿ, ಸರ್ದಾರ್ ಯಮನೂರಪ್ಪ, ಅಶೋಕ, ದೇವಸ್ಥಾನದ ಅರ್ಚಕ ಪೂಜಾರಿ ವೆಂಕಟೇಶ್ ,ಪುರಸಭೆ ಮಾಜಿ ಅಧ್ಯಕ್ಷ ಗುಂಡ್ರು ಹನುಮಂತ ಇತರರು ಉಪಸ್ಥಿತರಿದ್ದರು.