🪔ನಿಧನ ವಾರ್ತೆ: ಶ್ರೀ ಮತಿ ಭಜನೆ ಹನುಮವ್ವ ನಿಧನ 🪔

Loading

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ 14 ನೇ ವಾರ್ಡಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಭಜನೆ ಹನುಮವ್ವ (75), ಮಂಗಳವಾರ ರಂದು ರಾತ್ರಿ 8.30 ಘಂಟೆಗೆ ಸ್ವ ಗೃಹದಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷಗಳಿಂದ ಅನಾರೋಗ್ಯ ದಿಂದ ಹಾಸಿಗೆಯಲ್ಲಿ ಬಳಲುತ್ತಿದ್ದು ಈ ದಿನ ನಿಧನರಾಗಿದ್ದಾರೆ. ಇವರ ಪತಿಯಾದ ದಿವಂಗತ ಭಜನೆ ಚೌಡಪ್ಪ ಇವರು ಹೆಸರಾಂತ ಭಜನಾ ಕಲಾವಿದರಾಗಿರುವುದರಿಂದ ದಿವಂಗತ ಭಜನೆ ಚೌಡಪ್ಪ ಇವರ ಧರ್ಮ ಪತ್ನಿ ಯಾದ ಭಜನೆ ಹನುಮವ್ವ ಇವರು ನಿಧನ ಹೊಂದಿದ್ದು, ಇವರಿಗೆ 3 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣುಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ,ಅಳಿಯಂದಿರು,ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.


ಅಂತ್ಯಕ್ರಿಯೆ– ಏಪ್ರಿಲ್ -09-04-2025 ಬುಧವಾರ ರಂದು 12. ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿನಗರದ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ– ಕೂಡ್ಲಿಗಿ , ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘ ಹಾಗೂ ದಲಿತ ಸಮುದಾಯದ ಮುಖಂಡರು ಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ, ವಿವಿದ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿದ ಜನಪ್ರತಿನಿಧಿಗಳು, ಹಾಗೂ ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿ ಪಟ್ಟಣ ಸೇರಿದಂತೆ ನೆರೆ ಹೊರೆ ಸಂಬಂದಿಕರು ಗ್ರಾಮಸ್ಥರು. ಇವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *