ರಥೋತ್ಸವದಲ್ಲಿ ಅನ್ನ ಸಂತರ್ಪಣೆ

Loading

ಹಗರಿಬೊಮ್ಮನಹಳ್ಳಿ :ತಾಲೂಕಿನ ದರ್ಶನ್ ಹೋಟೆಲ್ ಅನ್ನುವುದಕ್ಕಿಂತ ಗಂಗಣ್ಣನ ಹೋಟೆಲ್ ಅಂತ ಪ್ರಸಿದ್ಧಿ ಪಡೆದಿದೆ.

ಗಂಗಣ್ಣ ಅವರು ಪ್ರತಿ ವರ್ಷ ಶ್ರೀ ವೆಂಕಟೇಶ್ವರ ಜಾತ್ರೆಯಲ್ಲಿ ಬರುವಂತ ಎಲ್ಲಾ ಭಕ್ತಾದಿಗಳಿಗೆ ಹೋಳಿಗೆ ಊಟವನ್ನು ಕೊಡುತ್ತಾ ಬಂದಿರುತ್ತಾರೆ.

ಯಾವುದಾದರೂ ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಪ್ರಸಾದವನ್ನು ಮಾಡಿಕೊಡುತ್ತಾರೆ .ಅಲ್ಲದೆ ಹೋಟೆಲ್ ನಲ್ಲಿ ಯಾರಾದರೂ ಹಸಿದು ಬಂದವರಿಗೆ ಹಣವಿಲ್ಲದಿದ್ದರೂ ಹೊಟ್ಟೆ ತುಂಬ ಊಟ ಕೊಡುತ್ತಾರೆ. ಅಲ್ಲದೆ ಕಷ್ಟದಲ್ಲಿದ್ದವರಿಗೆ ಸಹಾಯ ಸಹ ಮಾಡುತ್ತಾ ಬಂದಿರುತ್ತಾರೆ.

ರಾತ್ರಿ ವೇಳೆ ಸಹ ತೊಂದರೆ ಯಲ್ಲಿದ್ದವರಿಗೆ ಅವರ ಮನೆಗೆ ಊಟವನ್ನು ಸಹ ಕಳಿಸಿಕೊಡುತ್ತಾರೆ.ಇವರ ಈ ಗುಣಕ್ಕೆ ಇವರ ಹಿರಿಯ ಮಗ ದರ್ಶನ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಆದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಮಗನ ಜಾಣತನಕ್ಕೆ ಪ್ರೀ ಸೀಟ್ ಸಿಕ್ಕಿರುತ್ತದೆ. ಇವರು ದೊಡ್ಡ ಸ್ನೇಹ ಬಳಗವನ್ನು ಹೊಂದಿದ್ದಾರೆ .

ಹಗರಿಬೊಮ್ಮನಹಳ್ಳಿ ಯ ದರ್ಶನ್ ಹೋಟೆಲ್ ಮಾಲೀಕರಾದ ಶ್ರೀ ಗಂಗಾಧರ ಇವರು ಸಾರ್ವಜನಿಕರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡುವುದರ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *