ಪಾಲಿಟೆಕ್ನಿಕ್ ಕಾಲೇಜ್ ಮುಂಭಾಗದಲ್ಲಿ ಎನ್‌ಹೆಚ್ 50 ರಸ್ತೆ ದಾಟಲು ಮೇಲ್ ಸೇತುವೆ ಮಾಡುವಂತೆ ವಿದ್ಯಾರ್ಥಿಗಳಿಂದ ಹಾಗೂ ಗ್ರಾಮಸ್ಥರಿಂದ ಒತ್ತಾಯ

Loading

ವಿಜಯ ನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಹೊರ ವಲಯದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಎನ್. ಎಚ್. 50 ಬೆಂಗಳೂರು ರಸ್ತೆ ಮಾರ್ಗ ವಾಗಿ ಹೋಗುವ ರಸ್ತೆ ಯ ಪಕ್ಕದಲ್ಲಿ ಇರುವಂತ ಕೂಡ್ಲಿಗಿ ಯಿಂದ ಸುಮಾರು 2 ಕಿ. ಮೀ ದೂರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕೂಡ್ಲಿಗಿಯಲ್ಲಿ ಇರುವುದರಿಂದ ಈ ಕಾಲೇಜ್ ನಲ್ಲಿ ಸರಿ ಸುಮಾರು 800 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಕಾಲೇಜ್ ಗೆ ನಲ್ಲಿದ್ದು ಕಾಲೇಜ್ ಗೆ ಬರುವಂತಹ ವಿದ್ಯಾರ್ಥಿಗಳು ಭಯದಲ್ಲಿ ಬಿತಿಯಲ್ಲಿ ಬರುವಂತಹ ಪರಿಸ್ಥಿತಿ ಇದೆ ಎನ್ನುತ್ತಾರೆ ವಿದ್ಯಾರ್ಥಿಗಳು

ಕಾರಣ, ಕಾಲೇಜ್ ಗೆ ಬರುವಂತಹ ಸಮಯದಲ್ಲಿ ಹಾಗೂ ಕಾಲೇಜ್ ಬಿಡುವ ಸಮಯದಲ್ಲಿ ಎನ್ ಎಚ್ 50 ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತ ಆಗುವಂತ ಭಯದ ಸಮಸ್ಯೆ ಕಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಕಾಲೇಜ್ ಗೆ ಬೇರೆ ಬೇರೆ ಊರು ಗಳಿಂದ ಮತ್ತು ಕೂಡ್ಲಿಗಿ ಪಟ್ಟಣದಿಂದ ಬರುವುದಕ್ಕೆ ಹಾಗೂ ಕಾಲೇಜಿನಿಂದ ಮನೆಗಳಿಗೆ ತೆರಳುವುದಕ್ಕೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಯು ಸಹ ಇಲ್ಲಾ, ಈ ರಸ್ತೆ ಯಲ್ಲಿ ಕಾರ್, ಲಾರಿ ಬಾರಿ ವಾಹನಗಳು ಅತಿ ವೇಗವಾಗಿ ಓಡಾಡುವ ರಸ್ತೆ ಯಾಗಿರುವುದಕ್ಕೆ ಹಾಗೆ ನಾವು ಮನೆಗಳಿಗೆ ತೆರಳಲು ಬಂದು ನಾವು ನಿಲ್ಲುವ ಈ ಸ್ಥಳದಲ್ಲಿ ಸಹ ಅಪಘಾತ ನಡೆದಿದೆ ಹಾಗೂ ಇದೆ ರಸ್ತೆಯಲ್ಲಿ ಮುಂದೇನು ಕೆಲ ದಿನಗಳ ಹಿದೇ ಅಷ್ಟೇ ಅಪಘಾತದಲ್ಲಿ ಸಂಭವಿಸಿದ 4 ಜನ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ಎಂದು ಭಯದಿಂದ ತಿಳಿಸಿರುತ್ತಾರೆ.

ಆದ್ದರಿಂದ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಪಕ್ಕದ ಮರಬನಹಳ್ಳಿ ಗ್ರಾಮಕ್ಕೆ ಹೋಗಲಿಕ್ಕೆ ಮೇಲ್ ಸೇತುವೆಯ ದಾರಿ ವ್ಯವಸ್ಥೆ ಮಾಡುವಂತೆ ಒತ್ತಾಯ ಮಾಡುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮರಬನಲ್ಲಿ ಗ್ರಾಮಸ್ಥರು ಮಾನ್ಯ ಸಿದ್ದರಾಮಯ್ಯನವರಿಗೆ ಹಾಗೂ ಸರ್ಕಾರದ ಸಂಬಂಧಪಟ್ಟಂತಹ ಅಧಿಕಾರಿ ವರ್ಗದವರಿಗೆ ಮೇಲ್ ಸೇತುವೆ ಮಾಡ್ಲಿಕ್ಕೆ ಒತ್ತಾಯ ಮಾಡುತ್ತಿದ್ದು ಹಾಗೂ ಮುಂದೆ ಆಗುವ ಅಪಘಾತಗಳನ್ನು ತಪ್ಪಿಸಿ ಮರ್ಬನಹಳ್ಳಿ ಮಂಜುನಾಥ ಹಾಗೂ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ.

ಈ ವಿಷಯ ವಾಗಿ ಮಾನ್ಯ ಕೂಡ್ಲಿಗಿ ಕ್ಷೇತ್ರದ ಶಾಸಕರು ಡಾಕ್ಟರ್ ಎನ್ ಟಿ ಶ್ರೀನಿವಾಸ್ ಹಾಗೂ ಶಿಕ್ಷಣ ಪ್ರೇಮಿ, ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಹರಿಕಾರರು ಆದ ಮಾನ್ಯರು ಸರ್ಕಾರದ ಗಮನ ಹರಿಸಿ ಸಂಬಂಧಪಟ್ಟಂತಹ ಅಧಿಕಾರಿಗಳಿಂದ ಈ ಮೇಲ್ ಸೇತುವೆ ದಾರಿ ವ್ಯವಸ್ಥೆ ಮಾಡುವಂತೆ ತಾಲೂಕಿನ ಅನೇಕ ಸಂಘಟನೆಗಳ ಮುಖಂಡರುಗಳ ಬೇಡಿಕೆ ಹಾಗೂ ಪ್ರಜ್ಞಾವಂತರ ಒತ್ತಾಯವಾಗಿದೆ

ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

Leave a Reply

Your email address will not be published. Required fields are marked *