
ಹೊಸಪೇಟೆ : ದಿನಾಂಕ:30/12/2024 ಸೋಮವಾರ ರಂದು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ, 18,ನೇ ವರ್ಷದ ಶಂಕರ್ ಮೇಟಿ ಗುರುಸ್ವಾಮಿಗಳು ಮತ್ತು ಮೇಟಿಕುಟುಂಬದವರ ವತಿಯಿಂದ ,ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯ, ಶಾಸ್ತ್ರ (ಪುಡಿ ಪೂಜೆ) ಮಹಾಪೂಜೆ ಕಾರ್ಯಕ್ರಮದಲ್ಲಿ ಮಾನ್ಯ ಪೂಜ್ಯ ಶ್ರೀ ಶಂಕರನ್ ನಂಪೂತಿರಿ ಗುರುಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಹೊಸಪೇಟೆ ಇವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ,ನಾಣ್ಯ ತುಲಾಭಾರ ಸೇವೆಯನ್ನು ಶಂಕರ್ ಮೇಟಿ ಮತ್ತು ಕುಟುಂಬದವರು, ಸಲ್ಲಿಸಿದ್ದರು , ನಂತರ ಎಲ್ಲಾ ಗ್ರಾಮದ ಗುರುಸ್ವಾಮಿವರಿಗೆ. ಭಕ್ತಿಪೂರ್ವಕವಾಗಿ ನೆನಪಿನ ಕಾಣಿಕೆ, ಕೊಟ್ಟು ಸನ್ಮಾನಿಸಲಾಯಿತು,

ಈ ಸಂದರ್ಭದಲ್ಲಿ ಪಾಪಿನಾಯಕನಹಳ್ಳಿ ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿ ಎಲ್ಲಾ ಸದ್ತಭಕ್ತರು ಸದ್ರಿ ಗ್ರಾಮದ,ಗುರುಸ್ವಾಮಿಗಳಾದ ಶ್ರೀ ಎಂ.ಸುರೇಶ್ ಗುರುಸ್ವಾಮಿ, ಜಿ.ಗೋವಿಂದ ಗುರುಸ್ವಾಮಿ, ಗಂಗಾವತಿ ತಾತಾಯ್ಯ ಗುರುಸ್ವಾಮಿ,ಕೊಳಗಲ್ಲು ಜನಾರ್ಧನ ರೆಡ್ಡಿ ಗುರುಸ್ವಾಮಿ, ಮೇಟ್ರಿ ಲಕ್ಷ್ಮಣ್ ಗುರುಸ್ವಾಮಿ, ಸಂಗನಕಲ್ಲು ನಾಗೇಶ್ ,ರುದ್ರೇಶ್, ಪಂಪಾಪತಿ , ರಾಘವೇಂದ್ರ , ಅಮರೇಶ , ಅಯ್ಯಪ್ಪ , ಬಸವರಾಜ , ಕೆ.ಎಸ್.ಸತ್ಯನಾರಾಯಣ, ಗಾದಿಗನೂರು, , ಕಾಕುಬಾಳ , ಬೈಲುವದ್ಧಿಗೇರಿ , ಹೊಸಪೇಟೆ , ಮತ್ತು ಸುತ್ತಮುತ್ತಲಿನ ಗ್ರಾಮಗಳ ಶ್ರೀ ಅಯ್ಯಪ್ಪಸ್ವಾಮಿ ಸದ್ತಭಕ್ತರು, ಮತ್ತು ಮೇಟಿ ಶಂಕರ್ ಗುರುಸ್ವಾಮಿ ಅವರ ಕುಟುಂಬದವರು ಸದ್ರಿ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ಸದ್ತಭಕ್ತರು ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಕೊಂಡರು.