” ರಾಷ್ಟ್ರೀಯ ಲೋಕ್ ಅದಾಲತ್‌ ಯಶಸ್ವಿ “

Loading

ಹಗರಿಬೊಮ್ಮನಹಳ್ಳಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರವರ ನಿರ್ದೇಶನದಂತೆ ತಾಲೂಕು ಕಾನೂನು ಸೇವೆಗಳ ಸಮಿತಿ, ಹಗರಿಬೊಮ್ಮನಹಳ್ಳಿ ರವರ ವತಿಯಿಂದ ದಿನಾಂಕ:14.12.2024ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ ನಿಮಿತ್ಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು, ಸದರಿ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು (138 NI Act) ಮತ್ತು ಪಾಲು ವಿಭಾಗ (Partition suits) ಪ್ರಕರಣಗಳು ಹಾಗೂ ಇತ್ಯಾದಿ ಪ್ರಕರಣಗಳಲ್ಲಿ ಕಕ್ಷಿದಾರರು ಹಾಗೂ ವಕೀಲರು ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಸದರಿ ಅದಾಲತ್‌ಗೆ ಸಹಕರಿಸಿರುತ್ತಾರೆ.

ಮಾನ್ಯ ಹಿರಿಯ ಸಿವಿಲ್‌ ನ್ಯಾಯಾಧೀಶರು ಶ್ರೀ ಮಧುಸೂದನ್.ಡಿ.ಕೆ, ರವರ ನ್ಯಾಯಾಲಯಾದಲ್ಲಿ 843 ಪ್ರಕರಣಗಳ ಪೈಕಿ 181 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು ರೂ.1,18,08,405ಗಳ ಪರಿಹಾರವಾಗಿರುತ್ತದೆ. ಹಾಗೆಯೇ ಮಾನ್ಯ ಸಿವಿಲ್‌ ನ್ಯಾಯಾಧೀಶರು ಶ್ರೀ ಸೈಯ್ಯದ್‌ ಮೋಹಿದ್ದಿನರವರ ಸಿವಿಲ್‌ ರವರ ನ್ಯಾಯಾಲಯದಲ್ಲಿ 1337 ಪ್ರಕರಣಗಳನ್ನು ಅದಾಲತ್‌ಗೆ ಗುರುತಿಸಿ ಅದರಲ್ಲಿ 533 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು ರೂ.11,59,584 ಗಳ ಪರಿಹಾರವಾಗಿರುತ್ತದೆ. ಜೊತೆಗೆ 398 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 18 ಪ್ರಕರಣಗಳನ್ನು ಇತ್ಯರ್ಥ ಮಾಡಿ ಒಟ್ಟು 15,24,500 ರೂ.ಗಳ ಪರಿಹಾರವಾಗಿರುತ್ತದೆ. ಈ ಸಂದರ್ಭದಲ್ಲಿ ಮಾನ್ಯ ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಪೊಲೀಸ್‌ ಸಿಬ್ಬಂದಿಗಳು ಹಾಗೂ ಕಕ್ಷಿದಾರರು ಹಾಜರಿದ್ದು ಅದಾಲತ್‌ ನ್ನು ಯಶಸ್ವಿಮಾಡಿರುತ್ತಾರೆ.

Leave a Reply

Your email address will not be published. Required fields are marked *