
ಹಗರಿಬೊಮ್ಮನಹಳ್ಳಿ : ಕ್ಷೇತ್ರದ ಯುವ ನಾಯಕರಾದ ಶ್ರೀ ಅಶೋಕ ಬಿ.ನಾಯ್ಕ್ ರವರ 26ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಎಸ್.ಭೀಮನಾಯ್ಕ ಅಭಿಮಾನಿ ಬಳಗ ಹಾಗೂ ಶ್ರೀ ಅಶೋಕ ಬಿ.ನಾಯ್ಕ ಅಭಿಮಾನಿ ಬಳಗದಿಂದ ಆಯೋಜಿಸಿರುವ ಉಚಿತ ಬೃಹತ್ ರಕ್ತದಾನ ಶಿಬಿರವನ್ನು ಮಾನ್ಯ ಕೆ.ಎಂ.ಎಫ್ ಅಧ್ಯಕ್ಷರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದು ರಕ್ತದ ಅನಿವಾರ್ಯತೆ ಮತ್ತು ಮಹತ್ವ ಅರಿತು ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು.
ರಕ್ತದಾನ ಮಾಡುವುದೇ ಪುಣ್ಯದ ಕೆಲಸ, ಇಂತಹ ಶಿಬಿರದಲ್ಲಿ ಯುವ ಸಮೂಹವು ಹೆಚ್ಚು ರಕ್ತದಾನ ಮಾಡುವುದರಲ್ಲಿ ತೊಡಗಬೇಕು. ಬೇರೆ ಯಾವ ವಸ್ತುಗಳನ್ನು ಮನುಷ್ಯರಿಗೆ ಕೊಟ್ಟರೆ ಅಷ್ಟಾಗಿ ಅದರ ಮೌಲ್ಯ ಇರುವುದಿಲ್ಲ, ಅದೇ ರಕ್ತದಾನ ಮಾಡಿದರೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಶ್ರೀ ಅಶೋಕ್ ನಾಯ್ಕ್ ರವರು ಅವರ ಹುಟ್ಟು ಹಬ್ಬದಂದು ಅವರೇ ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುತ್ತಾ ಬರುತ್ತಿದ್ದಾರೆ ಇದನ್ನು ಶ್ರೀ ಎಸ್ ಭೀಮನಾಯ್ಕ್ ಅಭಿಮಾನಿ ಬಳಗ ಹಾಗೂ ಶ್ರೀ ಅಶೋಕ್ ನಾಯ್ಕ್ ಅಭಿಮಾನಿ ಬಳಗದ ವತಿಯಿಂದ ಅಯೋಜಿಸಿರುವುದರಿಂದ ರಕ್ತ ದಾನಿಗಳು ದಿನಾಂಕ 08/12/2024ರಂದು ಮಾನ್ಯ ಕೆ.ಎಂ.ಎಫ್ ಅಧ್ಯಕ್ಷರ ಕಾರ್ಯಾಲಯದಲ್ಲಿ ಈ ಮಹದಾನದಲ್ಲಿ ಬಾಗಿಯಗಲು ಕೋರುತ್ತೇವೆ ಎಂದು ಅಭಿಮಾನಿ ಗಳು ತಿಳಿಸಿದ್ದಾರೆ.