
ಕೂಡ್ಲಿಗಿ :ತಾಲೂಕಿನ ಕೃಷಿ ಸಂಬಂಧ ಪಟ್ಟ ಇಲಾಖೆಯಲ್ಲಿ ಕೃಷಿಕ ಚುನಾವಣೆಯನ್ನ ರೈತರ ಗಮನಕ್ಕೆ ಇಲ್ಲದೆ ತಹಸೀಲ್ದಾರ್ ಮತ್ತು ಕೃಷಿ ಸಹಾಯಕ ಅಧಿಕಾರಿಗಳು ಸೇರಿದಂತೆ ಯಾವುದೇ ಮೀಟಿಂಗ್ ಮಾಡದೇ 20 ವರ್ಷದಿಂದ ಹಳೆಯ ಕೃಷಿಕ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮತ್ತು ಸದಸ್ಯರನ್ನ ಇವರನ್ನೆ ಮುನ್ನಡೆಸುವ ಹುನ್ನಾರು ನಡೆಸಿದ್ದಾರೆ, ಅಧಿಕಾರಿಗಳು ಮತ್ತು ಚುನಾವಣೆ ಅಧಿಕಾರಿಗಳ ವಿರುದ್ಧ ಹಸಿರು ಸೇನೆಯ ಹುಚ್ಚೇನಹಳ್ಳಿ ಮಂಜುನಾಥ್ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ್ ಆರೋಪಿಸಿದರು.
ಚುನಾವಣೆಯ ಪ್ರಕ್ರಿಯೆಗಳು ಮಾಧ್ಯಮ ಪತ್ರಿಕೆಯ ಪ್ರಕಟಣೆ ಇಲ್ಲದೆ ಚುನಾವಣೆ ಮಾಡಿಕೊಂಡಿದ್ದಾರೆ.ಎಷ್ಟು ಹಣ ಷೇರ್ ಕಟ್ಟ ಬೇಕೆಂದು ಇದುವರೆಗೂ ಯಾವ ರೈತರಿಗೂ ಪತ್ರಿಕೆಯ ಮೂಲಕದಿಂದ ತಿಳಿಸಿರುವುದಿಲ್ಲ, ತಾಲೂಕಿನ ಮೂರು ಓಬಳಿಯ ಗುಡೇಕೋಟೆ ಖಾನಹೊಸಹಳ್ಳಿ, ಉಜ್ಜಿನಿ ಮೂರು ಓಬಳಿಯ ಬರುವ ಕೃಷಿಕ ಹೊಸ ಸದಸ್ಯರಗಳಿದ್ದು ಹಳೆಯ ಸದಸ್ಯರನ್ನೆ ಮುಂದೆವರಿಸಿಕೊಂಡು ಹೋಗುವುದಕ್ಕೆ ಅಧಿಕಾರಿಗಳು ಕಾನೂನಿನ ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗುಡಿಗಿದರು.
ಚುನಾವಣೆಯನ್ನ ತಡೆ ಹಿಡಿಯುವಂತೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಇವರಿಗೆ ಮನವಿ ಪತ್ರ ನೀಡಿದರು.ಈ ಸಂಧರ್ಭದಲ್ಲಿದ್ದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ, ಜಿಲ್ಲಾಧ್ಯಕ್ಷರಾದ ಕೆ. ಬಸವರಾಜ್,ಜಿಲ್ಲಾಉಪಾಧ್ಯಕ್ಷರಾದ ಬಣಕಾರ್ ಕೊಟ್ರೇಶ್,ತಾಲೂಕು ಅಧ್ಯಕ್ಷರಾದ ಬಿ. ಬೀಮಪ್ಪ, ಕೊಟ್ರೇಶ್,ಎಂ. ಸೂರಪ್ಪ, ಹಂಪಣ್ಣ, ಸಿ. ಎನ್. ತಿಪ್ಪೇಸ್ವಾಮಿ, ಇನ್ನು ಇತರರಿದ್ದರು.