
ಕೂಡ್ಲಿಗಿ : ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಹಿನ್ನಲೆ.ಸಾವನಪ್ಪಿದ್ದ ಬಾಣಂತಿಯ ಕುಟುಂಬಸ್ಥರ ಭೇಟಿ ಮಾಡಿದ ಕೂಡ್ಲಿಗಿ ಶಾಸಕರಾದ ಡಾ.ಎನ್ ಟಿ ಶ್ರೀನಿವಾಸ ಅವರು ಬುಧವಾರ ಬಿಮ್ಸ್ ನಲ್ಲಿ ಹೆರಿಗೆಯಾದ ಬಳಿಕ ಮೃತಪಟ್ಟಿದ್ದ ಬಾಣಂತಿ ಮಹಾಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ ಅವರು ತಾಲೂಕಿನ ಸಿ ಎಸ್ ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಮಹಾಲಕ್ಷ್ಮಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಮತ್ತು
ವೈಯಕ್ತಿಕ ಸಹಾಯ ಮಾಡಿ, ಮಗುವಿನ ಹೆಸರಲ್ಲಿ ಡೆಪಾಸಿಟ್ ಮಾಡೋದಾಗಿ ಹೇಳಿದ ಶಾಸಕರು ತಿಳಿಸಿದ್ದಾರೆ. ಹಾಗೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.