ಸಾಮಾಜಿಕ ಸಮಾನತೆಗಾಗಿ ವಿಭೂತಿ

Loading

ವಿಭೂತಿ ಧರಿಸಲೂ ಹೆಣ್ಣು-ಗಂಡು ಎಂಬ _ಲಿಂಗ ಬೇದವಿಲ್ಲ, ಜಾತಿ ಬೇದವಿಲ್ಲ, ವಗ೯ಬೇದವಿಲ್ಲ ಸ್ವಾಮಿಗಳು-ಸಂಸಾರಿಗಳು ಎಂಬ ಆಶ್ರಮ ಬೇದವಿಲ್ಲ, ಹಗಲು-ರಾತ್ರಿ ಎಂಬ ಕಾಲ ಭೇದವಿಲ್ಲ.

ವಿಭೂತಿ ಧರಿಸಿದವರೆಲ್ಲರೂ ಸಮಾನರೂ,ಎಂಬ 12ನೆಯ ಶತಮಾನದ ಅನುಭವ ಮಂಟಪದ ನಿಯಮ.

ವಿಭೂತಿಯ ಉಪಯೋಗಗಳು: ಸಾತ್ವಿಕ ಕಳೆ ವೃದ್ದಿಯಾಗುಲು:ಭಕ್ತಿಯಿಂದ ಶ್ರೀವಿಭೂತಿಯನ್ನು ಅಂಗ(ದೇಹ)ಕ್ಕೆ ಧರಿಸುವದರಿಂದ ಮಾಂಸಪಿಂಡ ಕಳೆದು ಕಾಯವು ಮಂತ್ರಪಿಂಡವಾಗುತ್ತದೆ.

ಪ್ರಾಸಾದಿಕರಿಸುವದು :ಹೊಸ ವಸ್ತುಗಳನ್ನು ಉಪಯೋಗಿಸುವ ಮೂದಲು ಅದಕ್ಕೆ ಭಕ್ತಿ (ಶಿವನಾಮ ಸ್ಮರಣೆ) ಯಿಂದ ಶ್ರೀ ವಿಭೂತಿಯನ್ನು ಧರಿಸುವದರಿಂದ ಗುರು ಕೃಪೆಯಿಂದ ಅದರಲ್ಲಿರುವ ನಕಾರಾತ್ಮಕ ಶಕ್ತಿ ಕಳೆದು, ಸಕಾರಾತ್ಮಕ ಶಕ್ತಿ,ದೈವ ಶಕ್ತಿ ಅವತರಣಗೊಳ್ಳುವದು.

ಸದಾಕಾಲ ವಿಭೂತಿಯ ಹಣೆಯ ಮೇಲಿ ಧರಿಸುವದರಿಂದ ಲಾಭಗಳು:

1) ವಿಭೂತಿಯ ದಾರಣೆಯಿಂದ ದುಷ್ಟಶಕ್ತಿಗಳ ಕಾಟದಿಂದ ತಪ್ಪಿಸಿಕೂಳ್ಳುಬಹುದು,
2) ಮುನ್ನ ಮಾಡಿದ ಪಾಪ ಹೋಗುವುದು,
3) ವಿಭೂತಿ ಧಾರಣೆ ಮಾಡಿದವರ ಮುಖ ನೋಡಿದವರಿಗೆ ಒಳ್ಳೆಯದಾಗುತ್ತದೆ.
4) ವಿಭೂತಿಯಲ್ಲಿ ರೋಗನಿವಾರಣ ಶಕ್ತಿ ಇರುತ್ತದೆ,ಮುಖದಲ್ಲಿ ಚಿತ್ಕಳೆ ವೃದ್ಧಿಯಾಗುವುದು (ಸಾತ್ವಿಕತೆ ತಂದುಕೊಡುತ್ತದೆ).
5) ಗುರುಗಳು ಹಾಗೂ ಶಿವಶರಣರ ಕೃಪೆಯಿಂದ ಬೇರೆಯವರಿಂದ ನಮಗೆ ತೂಂದರೆಯಾಗುವದಿಲ್ಲ,
6) ಇದು ಸನಾತನ ಹಿಂದೂ ಧರ್ಮದ ಅಷ್ಟಾವರಣದ ಒಂದು ಪ್ರಮುಖವಾದ ಅವರಣ.
7) ವಿಭೂತಿ ಧಾರಣದಿಂದ ಶರೀರ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ,
8) ವಿಭೂತಿ ಧಾರಣೆಯಿಂದ ಮನಸ್ಸು ಶಾಂತಿಯ ಕಡೆ ವಾಲುತ್ತದೆ,
9) ಇದು ಬಾಹ್ಯ ಶರೀರದ ರಕ್ಷಕ ಹಾಗೂ ಆಧ್ಯಾತ್ಮ ವಿಕಾಶಕ್ಕೆ ಅನುಕೂಲವಾಗುವ ಸಾಧನ.
10) ವಿಭೂತಿ ದಾರಣೆಯಿಂದ ಜ್ಞಾನನೇತ್ರ ಪಡೆಯಲು ಸಾದ್ಯ,
11) ವಿಭೂತಿ,ಬರೀ ಪೂಜಾ ಸಾಧನವಾಗದೇ, ಭಕ್ತಿಗೆ, ಮುಕ್ತಿಗೆ ಸಾಧನವಾಗುತ್ತದೆ.
12) ಗೌರವ ಭಾವನೆ ತಂದುಕೊಡುತ್ತದೆ,

24×7 ವಿಭೂತಿಯನ್ನು ಯಾವಗಲೂ ಧರಿಸಬಹುದು. ವಿಭೂತಿಯ ಇದು ಶಿವತತ್ವ ಹಾಗೂ ಶಿವಶರಣರ ತತ್ವ,ವಿಭೂತಿ ಧರಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ, ಚಿಕ್ಕವರು -ದೊಡ್ಡವರು, ಯುವಕರು -ಯುವತಿಯರು ಎಲ್ಲರೂ ವಿಭೂತಿ ಧರಿಸಿ, ಜೀವನ ಪಾವನವಾಗಿಸಿ,

ಲೇಖನ : ಕೆ, ಶಾಂತರಾಜ್, ಮೇದಾರ್
ಹೊಸಪೇಟೆ, ವಿಜಯನಗರ, ಜಿಲ್ಲೆ,

Leave a Reply

Your email address will not be published. Required fields are marked *