
ಕೂಡ್ಲಿಗಿ: ಪಟ್ಟಣದ ಅಧಿ ದೇವತೆ ಗ್ರಾಮ ದೇವತೆ, ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನದ ಕಳಸಾರೋಹಣ ಮತ್ತು ದೇವಸ್ಥಾನ ಲೋಕಾರ್ಪಣೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪಟ್ಟಣದ ಎಲ್ಲಾ ಸಮುದಾಯದ ಹಿರಿಯರು ದೈವಸ್ಥರು, ಹಾಗೂ ಆಯಗಾರರು ಸಮಕ್ಷಮ ಅಕ್ಟೋಬರ್ 25ರಂದು ದೇವಸ್ಥಾನದ ಆವರಣದಲ್ಲಿ, ಜರುಗಿದ ಪೂರ್ವ ಭಾವಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ನೂತನ ದೇವಸ್ಥಾನ ಕಳಶಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಹಿನ್ನಲೆಯಲ್ಲಿ, ಸಾಂಪ್ರದಾಯಿಕ ಧಾರ್ಮಿಕ ನಿಯಮಾವಳಿಯಂತೆ. ಪೂರ್ವ ಯೋಜಿತ ಧಾರ್ಮಿಕ ಕೈಂಕರ್ಯಗಳು, ದೇವಿಯ ಸಾನಿಧ್ಯದಲ್ಲಿ ನವಂಬರ್ 5 ರಿಂದ ಆರಂಭಗೊಳ್ಳುತ್ತವೆ. ನವಂಬರ್ 8 ಶುಕ್ರವಾರದಂದು, ಶ್ರೀಜಗದ್ಗುರುಗಳು ಹಾಗೂ ಶ್ರೀಮಹರ್ಷಿ ವಾಲ್ಮೀಕಿ ಪೀಠದ ಶ್ರೀಗಳ ಸಾನಿಧ್ಯದಲ್ಲಿ. ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನಕ್ಕೆ ಕಳಶಾರೋಹಣ, ಮತ್ತು ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಧರ್ಮಾಧಿಕಾರಿಗಳಾದ ಹಿರೇಮಠದ ಚಿದಾನಂದ ಸ್ವಾಮಿಯವರು ಮಾಹಿತಿ ನೀಡಿದ್ದಾರೆ. ಕಾರಣ ಪಟ್ಟಣದ ನಾಗರೀಕರು ದೈವಸ್ತರು, ನೆರೆ ಹೊರೆಯ ಗ್ರಾಮಗಳ ದೇವಿಯ ಭಕ್ತರು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಲಾಗಿತು.

ನ 5-8 ರವರೆಗೆ ಧಾರ್ಮಿಕ ಕಾರ್ಯಕ್ರಮಗಳ ವಿವರ: ನವಂಬರ್ 5 ಮಂಗಳವಾರ ಬೆಳಿಗ್ಗೆ 8 ಗಂಟೆ ಯಿಂದ ಕಂಕಣ ಧಾರಣೆ, ನಂತರ ಗಂಗೆ ಪೂಜೆ ಹಾಗೂ ಗೋ ಪೂಜೆ. ಮಂಗಳವಾರ ಸಂಜೆ 7 ಗಂಟೆ ಯಿಂದ ದೇವಿಯನ್ನು ಹೊಳೆಗೆ ಹೊರಡಿಸಿ, ಗುಡಿ ತುಂಬಿಸಿಕೊಳ್ಳುವುದು. ನವಂಬರ್ 6 ಬುಧವಾರ ಸಂಜೆ ಪುಣ್ಯಹ: ನಾಂದಿ, ಗಣಪತಿ ಹೋಮ ಇತರೆ ಆರಾಧನೆಯ ದೇವರುಗಳ ಪ್ರತಿಷ್ಠಾಪನೆ. ನವಂಬರ್ 7 ಗುರುವಾರ ಗಣ ಹೋಮ, ಸುದರ್ಶನ ಹೋಮ, ಚಂಡಿಕಾ ಹೋಮ, ಕರಗಲ್ಲು ಮತ್ತು ನೂತನ ಕಳಸದ ದೀಕ್ಷಾ ಸಂಸ್ಕಾರ ಪೂಜೆ. ನವಂಬರ್ 8 ರ ಶುಕ್ರವಾರ ಸೂರ್ಯೋದಯ ಸಮಯದಲ್ಲಿ, ಕರಗಲ್ಲು ಪ್ರತಿಷ್ಠಾಪನೆ, ನಂತರ ಉಜ್ಜಿನಿ ಶ್ರೀಜಗದ್ಗುರುಗಳು ಹಾಗೂ ಮಹರ್ಷಿ ಶ್ರೀವಾಲ್ಮೀಕಿ ಪೀಠದ ಶ್ರೀಗಳ ಸಾನಿಧ್ಯದಲ್ಲಿ. ನೂತನ ದೇವಸ್ಥಾನಕ್ಕೆ ಕಳಸಾರೋಹಣ, ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ. ಮಹಾಮಂಗಳಾರತಿ. ಪ್ರಸಾದ ಸೇವೆ ಜರುಗಲಿದೆ. ಕಾರಣ ಕೂಡ್ಲಿಗಿ ಪಟ್ಟಣದ ಸಮಸ್ತ ದೇವಸ್ತರು, ನಾಗರೀಕರು ಹಾಗೂ ದೇವಿಯ ಭಕ್ತರು ಸೇರಿದಂತೆ. ನೆರೆ ಹೊರೆ ಗ್ರಾಮಗಳ ಹಾಗೂ ನಾಡಿನೆಲ್ಲೆಡೆಗಳಲ್ಲಿ ನೆಲೆಸಿರುವ, ಶ್ರೀಊರಮ್ಮ ದೇವಿಯ ಭಕ್ತರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕಿದೆ. ಮತ್ತು ಶ್ರೀ ಊರಮ್ಮ ದೇವಿಯ ಸನ್ನಿದಿಗೆ ತನು ಮನ ಧನಾಧಿಗಳನ್ನು ಅರ್ಪಿಸಿ ಸೇವೆ ಗೈದು. ಶ್ರೀ ಊರಮ್ಮದೇವಿಯ ಕೃಪೆಗೆ ಪಾತ್ರರಾಗಬೇಕೆಂದು, ದೇವಸ್ಥಾನದ ಭಕ್ತ ಮಂಡಳಿ ಹಾಗೂ ಆಯಗಾರರು ಪಟ್ಟಣದ ಪ್ರಮುಖ ಮುಖಂಡರು ಈ ಮೂಲಕ ಕೋರಿದ್ದಾರೆ.