ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ ರವರು ರೈತಪರ ವಾಗಿ ಧ್ವನಿ ಎತ್ತುವ ಮೂಲಕ ಕ್ಷೇತ್ರದ ಜನತೆಯ ಗಮನ ಸೆಳೆದಿದ್ದಾರೆ.
ಮಂಗಳವಾರ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ನೇಮಿರಾಜ್ ನಾಯ್ಕ ಕ್ಷೇತ್ರದ ರೈತಾಪಿ ವರ್ಗದವರು ಅನುಭವಿ ಸುತ್ತಿರುವ ನೀರಾವರಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಸದನದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು.
ಕ್ಷೇತ್ರದ ಬಹುಸಂಖ್ಯಾತ ರೈತರು ತುಂಗಭದ್ರಾ ಸೇತುವೆ ನಿರ್ಮಾಣಕ್ಕೆ ಸಾವಿರಾರು ಎಕರೆ ಭೂಮಿಯನ್ನು ನೀಡುವ ಮೂಲಕ ತಮ್ಮೆಲ್ಲಾ ಆಸ್ತಿಗಳನ್ನು ತ್ಯಾಗ ಮಾಡಿದ್ದಾರೆ. ಸೇತುವೆ ನಿರ್ಮಾಣದಿಂದ ದೂರದ ಆಂಧ್ರಪ್ರದೇಶದ ರೈತರುಗಳಿಗೆ ಅನುಕೂಲವಾಗಿದೆ ಆದರೆ ಇಲ್ಲಿಯ ರೈತರು ಈಗಲೂ ಮಳೆಯನ್ನು ಅವಲಂಬಿಸಿದ್ದಾರೆ. ಐಪಿ ಸೆಟ್ ಗಳು ಇದ್ದರೂ ಈಗ ಅಂತರ್ಜಲ ಕುಸಿದಿದೆ. ನೀರಾವರಿ ಪಂಪುಸೆಟ್ ಗಳಿಗೆ ಅವಶ್ಯಕತೆ ಇರುವ ಟ್ರಾನ್ಸ್ ಪಾರ್ಮ ಹಾಗೂ ವಿದ್ಯುತ್ ವಿತರಣಾ ಉಪ ಕೇಂದ್ರಗಳ ಸ್ಥಾಪನೆ ಮಾಡುವ ಕುರಿತು ಸದನದ ಮುಂದೆ ವಿವರಿಸಿದ್ದಾರೆ. ಕ್ಷೇತ್ರದ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಸಮಗ್ರ ನೀರಾವರಿ ಕುರಿತಂತೆ ನಾನಾ ಏತ ನೀರಾವರಿ ಹಾಗೂ 17 ಕೆರೆಗಳಿಗೆ ನೀರುಣಿಸುವ ಯೋಜನೆಯನ್ನು ಜಾರಿಗೊಳಿಸಬೇಕು 5
ಗ್ಯಾರಂಟಿ ಯೋಜನೆಗಳಿಂದ ರೈತರಿಗೆ ಯಾವುದೇ ಪ್ರಯೋಜನ ಆಗದು ರೈತರ ಹೊಲಗಳಿಗೆ ನೀರು ತುಂಬುವ ಯೋಜನೆ ಗಳನ್ನು ಜಾರಿ ಮಾಡಿದರೆ ಮಾತ್ರ ಬದುಕು ಹಸನವಾಗುತ್ತದೆ. ಎಂದು ಸದನದಲ್ಲಿ ರೈತರ ಕಷ್ಟಗಳನ್ನು ವಿವರಿಸಿ ಕ್ಷೇತ್ರದ
ರೈತಾಪಿ ವರ್ಗದವರ ಆಶಯಗಳನ್ನು ಸರ್ಕಾರದ ಮುಂದೆ ಮನಮುಟ್ಟುವಂತೆ ಹೇಳಿದರು. ಇದರಿಂದ ರೈತರ ಪರವಾಗಿ ಧ್ವನಿ ಎತ್ತಿರುವುದಕ್ಕೆ ಕ್ಷೇತ್ರದಲ್ಲಿ ಅಭಿನಂದನೆ ವ್ಯಕ್ತವಾಗುತ್ತಿದೆ. ಆದರೆ ಇವರ ಮನವಿಗೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ನೀರಾವರಿ ಅಭಿವೃದ್ಧಿ ಬಗ್ಗೆ ವಿಧಾನ ಸಭೆಯ ಅಧ್ಯಕ್ಷರಿಗೆ ವಿಸ್ತಾರವಾಗಿ ಮಾತನಾಡಿ ಹೇಳಿದ್ದಾರೆ, ಹಿಂದೆ ಅಖಂಡ ಬಳ್ಳಾರಿ ಈಗಿನ ವಿಜಯನಗರ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವುದು ಗಣಿ ನಾಡು ಆದರೆ ಅಭಿವೃದ್ಧಿ ಕೆಲಸದಲ್ಲಿ ಮಾತ್ರ ಹಿಂದೆ ಇದೆ ಎಂದು ವಿವರವಾಗಿ ಹೇಳಿದ್ದಾರೆ. ಶಾಸಕರಿಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇವೆ. ಹಗರಿಬೊಮ್ಮನಳ್ಳಿ ರೈತಮುಖಂಡ ಮಾಲು ಸಾಹೇಬ್ ಏಣಗಿ ಪ್ರಶಂಸಿದರು.
ವಿಧಾನಸಭಾ ಅಧಿವೇಶನದಲ್ಲಿ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ನೇಮಿರಾಜ್ ನಾಯ್ ಮಾತನಾಡಿದ್ದಾರೆ. ಕ್ಷೇತ್ರದ 17 ಕೆರೆಗೆ ಶಾಶ್ವತ ನೀರಾವರಿ, ಏತ ನೀರಾವರಿ ಅಭಿವೃದ್ಧಿ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಲು ಟ್ರಾನ್ಸ್ ಪಾರ್ಮರ್ ಉಪ ಕೇಂದ್ರಗಳ ಕುರಿತು ಸದನದಲ್ಲಿ ಮಾತನಾಡಿ ಯೋಜನೆ ಜಾರಿಗೆ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ವೈ.ಮಲ್ಲಿಕಾರ್ಜುನ ಜೆಡಿಎಸ್ ತಾಲೂಕು ಅಧ್ಯಕ್ಷರು, ಮೈನಳ್ಳಿ ಕೊಟ್ರೇಶಪ್ಪ ಬಾಚಿಗೊಂಡ ನಹಳ್ಳಿ ಶೇಖರಪ್ಪ, ಸರ್ದಾರ್ ಯಮನೂರಪ್ಪ, ಬಣಕಾರ ಅರುಣ್, ಹಾಗೂ ಕ್ಷೇತ್ರದ ರೈತಾಪಿ ವರ್ಗ ಕ್ಷೇತ್ರ ಹಗರಿಬೊಮ್ಮನಹಳ್ಳಿ ಅಭಿನಂದನೆ ಸಲ್ಲಿಸಿದರು,
