
ಹಗರಿಬೊಮ್ಮನಹಳ್ಳಿ : ನಗರದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 30ನೇ ವರ್ಷದ ಕನ್ನಡ ಯುವಶಕ್ತಿ ವೇದಿಕೆಯಿಂದ ಈ ದಿನ ವಿಶೇಷವಾಗಿ ಹಗಲಿರಳು ನಮ್ಮ ಸೇವೆಗೆ ಶ್ರಮಿಸುವ ಸಾರಿಗೆ ಇಲಾಖೆಯ ಚಾಲಕ ಮತ್ತು ನಿರ್ವಾಹಕರ ವತಿಯಿಂದ ಧ್ವಜಾರೋಹಣ ವನ್ನು ನೆರವೇರಿಸಲಾಯಿತು.

ಈ ಸಮಯದಲ್ಲಿ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಾಲಕರಾದ ಬಸನಗೌಡ ನಿರ್ವಾಹಕರಾದ ಮಲ್ಲಣ್ಣ ಹಾಗೂ ಕನ್ನಡ ಯುವಶಕ್ತಿ ವೇದಿಕೆಯ ಸಂಚಿ. ಶಿವಕುಮಾರ್, ಗುರುಬಸವರಾಜ್, ನಾಗಭೂಷಣ್ ಗೆದ್ದಿಕೆರಿ, ನಾಗರಾಜ್ ಸರ್, ಸಂತೋಷ್ ಸರ್ ,ಸಂಪತ್ ಕುಮಾರ್, ನಾಗೇಶ್ ,ಪ್ರಕಾಶ್, ಉಮೇಶ, ಕೊಟ್ರೇಶ್ ಹಾಗೂ ಹಿರಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ವಿಶೇಷವಾಗಿ ಘಟಕದ ವ್ಯವಸ್ಥಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ತಿಳಿಸಿದರು.