
ಹಗರಿಬೊಮ್ಮನಹಳ್ಳಿ : ದಿನಾಂಕ:26.10.2024ರಂದು ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆದರ್ಶ ವಿದ್ಯಾಲಯ, ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಪ್ರಯುಕ್ತ ಆದರ್ಶ ವಿದ್ಯಾಲಯ ಹಗರಿಬೊಮ್ಮನಹಳ್ಳಿ ಹಮ್ಮಿಕೊಳ್ಳಲಾಗಿತ್ತು,
ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ಹಗರಿಬೊಮ್ಮನಹಳ್ಳಿ ಆದ ಮಾನ್ಯ ಶ್ರೀ ಸೈಯದ್ ಮೋಹಿದ್ದಿನ ಅವರು ಉದ್ಘಾಟನೆ ಮಾಡಿ ತಮ್ಮ ಭಾಷಣದಲ್ಲಿ ಹೆಣ್ಣು ಮಕ್ಕಳ ಸಬಲೀಕರಣವನ್ನು ಉತ್ತೇಜಿಸಲು ಅವರ ಮಾನವ ಹಕ್ಕುಗಳನ್ನು ಪೂರೈಸಲು ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 11ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದು ತಮ್ಮ ಉದ್ಘಾಟನೆ ಭಾಷಣದಲ್ಲಿ ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಶ್ರೀ ಕಾಗಿ ಪ್ರಹ್ಲಾದ್ ವಕೀಲರು ಈ ನಿಟ್ಟಿನಲ್ಲಿ ಶಿಕ್ಷಣ ಹಾಕ್ದೆ, ಬಾಲ್ಯ ವಿವಾಹ, ಘೋಷಣೆ ಕಾನೂನು ಹಕ್ಕುಗಳು, ಔಷದಿಯ ಹಕ್ಕುಗಳ, ಕೊರತೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಣ್ಣು ಮಕ್ಕಳು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11ರಂದು ಆಚರಿಸಲಾಗುತ್ತದೆ ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಹೆಣ್ಣು ಮಕ್ಕಳ ಸಾಧನೆಯನ್ನು ಗುರುತಿಸುವುದು ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಹೆಣ್ಣು ಮಕ್ಕಳ ಹೆದರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಮುಖ್ಯ ಉದ್ದೇಶವಾಗಿರುತ್ತದೆ, ಹಲವಾರು ಜಾಗತಿಕ ವರದಿಗಳು ಮತ್ತು ಅಂಕಿ ಅಂಶಗಳ ಪ್ರಕಾರ ಕೌಟುಂಬಿಕ ಹಿಂಸಾಚಾರ ಬಲವಂತವಾದ ವಿವಾಹಗಳು ಶಿಕ್ಷಣದ ಕೊರತೆ ಮತ್ತು ಲೈಂಗಿಕ ದೌರ್ಜನಕ್ಕೆ ಪ್ರಪಂಚದಾದ್ಯಂತ ಅದೆಷ್ಟೋ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ.

ಈ ನಿಟ್ಟಿನಲ್ಲಿ ಶಿಕ್ಷಣ ಎನ್ನು ಹಾಕ್ದೆ ಬಾಲೆ ವಿವಾಹ ಘೋಷಣೆ ಕಾನೂನು ಹಕ್ಕುಗಳು ಔಷದಿಯ ಹಕ್ಕುಗಳ ಕೊರತೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಹಾಗೂ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದು ನಮ್ಮ ಸಂಪನ್ಮೂಲ ವ್ಯಕ್ತಿಯಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾನ್ಯ ವಕೀಲರ ಸಂಘದ ಅಧ್ಯಕ್ಷರು ಆದ ಪಿ. ರಮೇಶ್, ವಕೀಲರು ರವರು ತಾವು ತಮ್ಮ ಶಿಕ್ಷಣಕ್ಕೆ ಗಮನಹರಿಸಿ ನಿಮ್ಮ ತಂದೆ ತಾಯಿಗಳನ್ನು ಹಾಗೂ ಶಿಕ್ಷಕರನ್ನು ನಿಮ್ಮ ಜೀವನದಲ್ಲಿ ಹೀರೋಗಳಾಗಿ ಮಾಡಿಕೊಳ್ಳಬೇಕಾಗಿ ತಿಳುವಳಿಕೆ ಮೂಡ್ಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀ ಸಿ.ಬೋರೇಗೌಡ,ಲಿಂಗ ಸಮಾನತೆಯನ್ನು ಉಪಯೋಗಿಸಲು ಹುಡುಗಿಯರು ಮತ್ತು ಮಹಿಳೆಯರು ಜೀವನದಲ್ಲಿ ಆಚರಿಸಲಾಗುತ್ತದೆ, ಮುಂದುವರೆದು ನಮ್ಮ ಸರ್ಕಾರದ ಆದೇಶದಂತೆ ನಮ್ಮ ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಕೆಲವೊಂದು ಸ್ಕೀಮ್ ಗಳನ್ನು ಮಾಡಿದ್ದು ಅದರಲ್ಲಿ ಭಾಗ್ಯಲಕ್ಷ್ಮಿ ಬಾಂಡ್,
ಸುಕನ್ಯಾ ಸಮೃದ್ಧಿ ಸ್ಕೀಮನ್ನು ಮಾಡಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಹಾಗೆಯೇ ನಿಮ್ಮ ಸುತ್ತಮುತ್ತಲ್ಲಿ ಬಾಲ್ಯ ವಿವಾಹ ಮಾಡಿದ್ದಲ್ಲಿ ನಮ್ಮ ಇಲಾಖೆಗೆ ದೂರನ್ನು ಕೊಡುವುದರ ಮೂಲಕ ಆ ಒಂದು ಮಗುವಿನ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದು ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿರುತ್ತಾರೆ.
ಮಾನ್ಯ ವಕೀಲರ ಸಂಘದ ಅಧ್ಯಕ್ಷರು ಆದ ಶ್ರೀನಿವಾಸ್ ಎಂ.ಎಸ್., ವಕೀಲರು ವಿದ್ಯಾರ್ಥಿ ಜೀವನದಲ್ಲಿ ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು ಹೊಂದಿಕೊಳ್ಳುವಂತೆ ಹಂಸ ಕ್ಷೀರ ನೀತಿಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶ್ರೀ ರವಿನಾಯಕ್ ಮುಖ್ಯ ಗುರುಗಳು ಆದರ್ಶ ಶಾಲೆ* ರವರು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ವಚ್ಛತೆಯ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ನುಡಿರುತ್ತಾರೆ.
ಹೆಚ್ ಆಂಜನೇಯ ವಕೀಲರು ನಿರೂಪಣೆಯನ್ನು ಮಾಡಿರುತ್ತಾರೆ, ರಾಜಶೇಖರಪ್ಪ ಕೆ, ದೈಹಿಕ ಶಿಕ್ಷಕರು ಆದರ್ಶ ಶಾಲೆ ಇವರು ಸ್ವಾಗತವನ್ನು ಮಾಡಿರುತ್ತಾರೆ.
ಸುರೇಶ್ ಎಚ್ ಎಚ್ ಕನ್ನಡ ಶಿಕ್ಷಕರು ಆದರ್ಶ ಶಾಲೆ ಇವರು ವಂದನಾರ್ಪಣೆ ಮಾಡಿರುತ್ತಾರೆ. ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಲೆಗೆ ಶಿಕ್ಷಕರು ಸದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.