ಕಸ ವಿಲೇವಾರಿ ಘಟಕಕ್ಕಾಗಿ 4 ಕೋಟಿ ರೂ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿ ಎಂ ಮರಿ ರಾಮಪ್ಪ ಪುರಸಭಾ ಅಧ್ಯಕ್ಷರು.

Loading

ಹಗರಿಬೊಮ್ಮನಹಳ್ಳಿ : ನಗರವು ಸುಮಾರು 23 ವಾರ್ಡ್ಗಳನ್ನು ಒಳಗೊಂಡಿದ್ದು ಸುಮಾರು 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಒಂದು ಪಟ್ಟಣವಾಗಿದೆ. ಇಲ್ಲಿ ಕಸ ವಿಲೇವಾರಿಯ ಸಮಸ್ಯೆ ದಶಕಗಳಿಂದಲೂ ಇರುವಂತದ್ದು ಗೊತ್ತಿರುವ ವಿಚಾರ.

ಹಗರಿಬೊಮ್ಮನಹಳ್ಳಿಯಲ್ಲಿ ಒಂದು ಸದೃಢವಾದ ಕಸ ವಿಲೇವಾರಿ ಘಟಕ ಇಲ್ಲದಿರುವುದು ಕಸ ವಿಲೇವಾರಿ ಸಮಸ್ಯೆಗೆ ಕಾರಣವಾಗಿತ್ತು.

ಇಂದು ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು , ಕೇಶವರೆಡ್ಡಿ ಮತ್ತು ಪುರಸಭಾ ಸದಸ್ಯರಾದ ಅಜೀಜ್ ಉಲ್ಲಾ , ರಾಧಾ ವೀರೇಶ್, ಬಾಳಪ್ಪ ಹಾಗೂ ಪುರಸಭೆಯ ಮುಖ್ಯ ಅಧಿಕಾರಿ , ಇಂಜಿನಿಯರ್ ಮತ್ತು ಅಧಿಕಾರಿಗಳ ತಂಡ ವರಲಹಳ್ಳಿ ಗ್ರಾಮದ ಕಸ ವಿಲೇವಾರಿ ಘಟಕದ ಕಾರ್ಯದ ಕಾರ್ಯ ಪ್ರಗತಿಯನ್ನು ನಡೆಸಿದರು.

ಕಸ ವಿಲೇವಾರಿ ಘಟಕದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು 4 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ವಾಗುತ್ತದೆ ಎಂದು ಅಧ್ಯಕ್ಷರಾದ ಎಂ ಮರಿ ರಾಮಪ್ಪನವರು ಮನ್ವಂತರ ಸುದ್ದಿ ವಾಹಿನಿಗೆ ತಿಳಿಸಿದರು.

ಹಾಗೂ ಇದೆ ಸಂದರ್ಭದಲ್ಲಿ ಬಿಡಾಡಿ ದನಗಳ ಸಾಕಾಣಿಕೆ ವರಲಹಳ್ಳಿ ಗ್ರಾಮದ ಗೋಶಾಲೆ ಗೆ ಭೇಟಿ ಕೊಟ್ಟರು.

Leave a Reply

Your email address will not be published. Required fields are marked *