ಕೂಡ್ಲಿಗಿ : ತಾಲೂಕಿನ ಉದ್ಯೋಗದಾತರಿಗೆ, ಹೊರಗುತ್ತಿಗೆ, ಗುತ್ತಿಗೆದಾರರಿಗೆ,ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ, ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅನುಷ್ಠಾನಗೊಳಿಸುತ್ತಿರುವ ಕಾನೂನುಗಳು ಯೋಜನೆಗಳ ಕುರಿತು ಕೊಟ್ಟೂರು ರಸ್ತೆಯಲ್ಲಿ ಬರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕೂಡ್ಲಿಗಿಯಲ್ಲಿ, ಒಂದು ದಿನದ ತಾಲೂಕು ಮಟ್ಟದ ಕಾರ್ಯಾಗಾರವನ್ನು ಡಾ. ಶ್ರೀನಿವಾಸ್ ಎನ್. ಟಿ. ಶಾಸಕರು ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮದ ಕಾರ್ಯಗಾರ ಕುರಿತು ಕಾರ್ಮಿಕರ ಸರ್ಕಾರ ಅನೇಕ ಸವಲತ್ತುಗಳ ಪಡೆದುಕೊಳ್ಳುವ ಕುರಿತು ತಿಳಿಸುತ್ತಾ ಸದುಪಯೋಗ ಪಡಿಸಿಕೊಳ್ಳುವಂತೆ ಕಾರ್ಮಿಕರಿಗೆ ಕರೆ ನೀಡಿದರು,
ಈ ಸಂದರ್ಭದಲ್ಲಿ ಶ್ರೀಮತಿ ಸುಧಾ ಗರಗ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು,ಕೊಪ್ಪಳ ಜಿಲ್ಲೆ.ರವರು ಅಧ್ಯಕ್ಷತೆ ವಹಿಸಿದ್ದರು. ಹಾಗೂ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಹಾಗೂ ತಾಲೂಕ ಪಂಚಾಯತ ಕೂಡ್ಲಿಗಿ ರವರು ಉಪಸ್ಥಿತರಿದ್ದರು.ಹಾಗೆ ಶ್ರೀಮತಿ ಮಂಜುಳಾ ಕಾರ್ಮಿಕ ನಿರೀಕ್ಷಕರು,ಕೂಡ್ಲಿಗಿ ಹಾಗೂ ಕೆ. ಮೌನೇಶ್. ಕಾರ್ಮಿಕ ನಿರೀಕ್ಷಕರು, ಹೂವಿನ ಹಡಗಲಿ ವೃತ್ತ, ಮತ್ತು ಅನೇಕ ಕಾರ್ಮಿಕರು, ವಿವಿಧ ಕಾರ್ಮಿಕ ಸಂಘಟನೆಗಳ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರು, ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪಿ.ಎಂ. ಈಶ್ವರಯ್ಯ ಮಾಡಿದರು.