ಈಜಲು ಹೋದ ಮೂವರು ಬಾಲಕರು ಸಾವು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಎನ್ ಟಿ ಶ್ರೀ ನಿವಾಸ್ ಶಾಸಕರು

Loading

ಕೂಡ್ಲಿಗಿ: ಈಜಲು ಹೋದ ಮೂವರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ಹರಿಯುತ್ತಿರುವ ಚಿನ್ನ ಹಗರಿ ಹಳ್ಳದಲ್ಲಿ ಈಜಾಡಲು ತೆರಳಿದ ಗ್ರಾಮದ ನಿವಾಸಿ ಜಯಣ್ಣ ಅವರ ಇಬ್ಬರು ಪುತ್ರರಾದ ಗುರು (14) 8ನೇ ತರಗತಿ, ವಿನಯ್ ಕುಮಾರ್ (11) 5ನೇ ತರಗತಿ, ಹಾಗೂ ಸೋಮಣ್ಣ ಇವರ ಪುತ್ರನಾದ ಸಾಗರ (14) 8ನೇ ತರಗತಿ ಮೃತ ಬಾಲಕರು ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಿಗ್ಗೆ 11-30 ಸಮಯದಲ್ಲಿ ಬಾಲಕರು ಹೂರ ವಲಯದಲ್ಲಿ ಇರುವ ಚಿನ್ನ ಹಗರಿ ಹಳ್ಳದಲ್ಲಿ ಈಜಾಡಲು ಹೋಗಿದ್ದು ಅತಿ ಹೆಚ್ಚು ನೀರು ಇರುವ ಕಾರಣ ಈಜು ಬಾರದೆ ನೀರಲ್ಲಿ ಮುಳುಗಿದ್ದಾರೆ. ಮಧ್ಯಾಹ್ನ 3:30ಕ್ಕೆ ಮೃತ ಬಾಲಕರ ಶವಗಳು ತೇಲಿದ್ದು ಅಲ್ಲಿನ ಕುರಿಗಾಯಿಗಳು ನೋಡಿ ಗ್ರಾಮಕ್ಕೆ ಬಂದು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಬಾಲಕರ ದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಕಾನ ಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

ಹಾಗೆ ಮಾನ್ಯ ಶಾಸಕರಾದ ಎನ್‌.ಟಿ ಶ್ರೀನಿವಾಸ್ ರವರಿಗೆ ವಿಷಯ ತಿಳಿದ ನಂತರ ಚಿಕ್ಕ ಕುಮತಿ ಗ್ರಾಮಕ್ಕೆ ತೆರಳಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ ಹಾಗೂ ಕುಟುಂಬಸ್ಥರಿಗೆ ಸಂತಾನ ಹೇಳುವುದರೊಂದಿಗೆ ಪರಿಹಾರ ನೀಡಿ. ಕುಟುಂಬಗಳಿಗೆ ಧೈರ್ಯ ತುಂಬಿದರು, ಸರ್ಕಾರದಿಂದ ಬರುವಂತಹ ಪರಿಹಾರವನ್ನು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ

ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ

Leave a Reply

Your email address will not be published. Required fields are marked *