
ಹಗರಿಬೊಮ್ಮನಹಳ್ಳಿ : ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ ಮತ್ತು ಪುರಸಭೆ, ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ದಿ:23.09.2024ರಂದು ಬೆಳಗ್ಗೆ: 08:30 ಗಂಟೆಗೆ ಮಾನ್ಯ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯೇ ಸೇವೆ 2024 ರ “ಸ್ವಭಾವ ಸ್ವಚ್ಛತಾ – ಸಂಸ್ಕಾರ ಸ್ವಚ್ಛತಾ” ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಸದರಿ ಅಭಿಯಾನದ ಚಾಲನೆಯನ್ನು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮಧುಸೂದನ್ ಡಿ.ಕೆ. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಉದ್ಘಾಟನೆ ಭಾಷಣದಲ್ಲಿ ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ, ಕೆಲಸ ಮಾಡುವ ಸ್ಥಳದಿಂದ ಮತ್ತು ಸುತ್ತಮುತ್ತಲಲ್ಲಿ ಆಗಬೇಕು, ಹಾಗೆಯೇ ಪ್ರತಿಯೊಬ್ಬರೂ ಕೂಡ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿರುತ್ತಾರೆ.
ಮಾನ್ಯ ಶ್ರೀ ಸೈಯ್ಯದ್ ಮೋಹಿದ್ದಿನ, ಸಿವಿಲ್ ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರು ಆದ ಶ್ರೀ ರಮೇಶ್ ವಕೀಲರು ರವರು ತಮ್ಮ ನುಡಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ನೆನಪಿಗಾಗಿ 2 ಅಕ್ಟೋಬರ್ 2014ರಂದು ಮಾನ್ಯ ಪ್ರಧಾನಿಯವರು ಚಾಲನೆ ನೀಡಿದ್ದು ದಿನದಿಂದ ಈವರೆಗೂ ಸ್ವಚ್ಛತೆ ಅಭಿಯಾನವನ್ನು ನಡೆಸಲಾಗುತ್ತಿದೆ, ಸಾರ್ವಜನಿಕ ತಮ್ಮ ಪ್ರದೇಶದಲ್ಲಿ ಸ್ವಚ್ಛವಾಗಿಟ್ಟುಕೊಳ್ಳಲು ವಿನಂತಿಸಿದರು.

ಸದರಿ ಸಂದರ್ಭ ದಲ್ಲಿ ವಕೀಲರ ಸಂಘದ ಸದ್ಯಸರು , ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಪುರಸಭೆಯ ಸಿಬ್ಬಂದಿಗಳು ಸದರಿ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.