ಸಾಮಾಜಿಕ ಶೋಷಣೆಗಳ ಕಾವ್ಯ ಬೆಳಕು ಚೆಲ್ಲುತ್ತದೆ

Loading

ಹಗರಿಬೊಮ್ಮನಹಳ್ಳಿ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಯಾಗಿದ್ದ “ಕನ್ನಡಮೆನಿಪ್ಪಾ ನಾಡು” ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ನಿಷ್ಠಿ ರುದ್ರಪ್ಪನವರು “ಪ್ರಸ್ತುತ ನಾವೆಲ್ಲಾ ದ್ವಿಪಾದ ಪಶುಗಳಾಗುತ್ತಿದ್ದೇವೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಕಾವ್ಯಗಳು ಮತ್ತೆ ನಮ್ಮನ್ನು ಮನುಷ್ಯರನ್ನಾಗಿ‌ ಮಾಡುತ್ತವೆ ಎಂದರು. ಸಾಹಿತಿ ಹುರುಕಡ್ಲಿ ಶಿವಕುಮಾರ ಅವರ ಕನ್ನಡ ಮೆನಿಪ್ಪಾನಾಡು” ಎಂಬ ಕವನ ಸಂಕಲ ಲೋಕಾರ್ಪಣೆ ಮಾಡಲಾಯಿತು. ಪುಸ್ತಕ ಪರಿಚಯ ಮಾಡಿದ ಗೂಳಪ್ಪ ಅವರು ಕವನಗಳು ಸಾರ್ವಕಾಲಿಕವಾಗಿದ್ದು ಸಮಾಜಕ್ಕೆ ದಿಕ್ಸೂಚಿಯಾಗಿದೆ ಎಂದರು‌. ಪ್ರಕಾಶಕರಾದ ಮೇಟಿಕೊಟ್ರಪ್ಪ ಮಾತನಾಡಿ “ಸಾಹಿತ್ಯ ಎಂಬುದು ಸದಾ ಜೀವಂತಿಕೆಯ ಚಿಹ್ನೆಯಂತೆ” ಎಂದರು. ಕಾರ್ಯದ ಸ್ವಾಗತವನ್ನು ಅಬ್ದುಲ್ ನಿಸಾರ್ ಅವರು ಮಾಡಿದರು, ಪ್ರಾರ್ಥನೆ ಮಂಗಳ ಅಧ್ಯಕ್ಷತೆ ದುರುಗಪ್ಪ ಸರ್ ಹಾಗೂ ಅತಿಥಿಗಳಾಗಿ ಅಕ್ಕಿ ಬಸವೇಶ ಇದ್ದರು.

ಕಾರ್ಯಕ್ರಮ ದಲ್ಲಿ ಉಪ್ಪಾರ ಬಸಪ್ಪ, ಗಣೇಶ ಹವಾಲ್ದಾರ್, ರಂಗನಾಥ ಹವಾಲ್ದಾರ್, ನಾಗಲಿಂಗಸ್ವಾಮಿ,ರವಿ,ಅನೇಕ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *