
ಕೂಡ್ಲಿಗಿ : ತಾಲೂಕಿನ ಖಾನಹೊಸಹಳ್ಳಿ ಗ್ರಾಮದ ಎನ್ ಎಚ್. 50ಪಕ್ಕದಲ್ಲಿ ಬರುವ ಗಾಣಿಗರ ಸಮುದಾಯ ಭವನದಲ್ಲಿ ಗುರುವಾರ ರಂದು ಹಮ್ಮಿಕೊಳ್ಳಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136 ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ರವರು ಉದ್ಘಾಟಿಸಿ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಾನೊಬ್ಬ ರೈತನ ಮಗನಾಗಿದ್ದೂ, ಕನ್ನಡ ಶಾಲೆಯಿಂದ ದೆಹಲಿಯ ವೈದ್ಯಕೀಯ ಶಿಕ್ಷಣವರೆಗೂ ಶಿಕ್ಷಕರ ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಬೆಳೆದಿರುವೆ. ಹಾಗೆ ಈ ಸಮಾಜಕ್ಕೆ ನನ್ನ ಕೈಲಾಗುವಷ್ಟು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಪುನ್ಹ ಸಮಾಜಕ್ಕೆ ಪಡೆದುಕೊಂಡಿರುವಂತದ್ದನ್ನೂ, ಮತ್ತೇ ಮರಳಿ ಸಮಾಜಕ್ಕೆ ಉತ್ತಮವಾದ ಅಳಿಲು ಸೇವೆ ಕೊಡಲು ಬಂದಿರುವೆ ತಾವುಗಳು ಶಿಕ್ಷಕರಾಗಿರುವುದರಿಂದ ನಿಮಗೆ ನಾನು ಏನೂ ಹೇಳಲಿ. ನೀವು ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮವಾದ ಗುಣಾತ್ಮಕ ಒಳ್ಳೆಯ ಶಿಕ್ಷಣ ವನ್ನು ಕೊಡಿ ಅಂತಹ ಅಷ್ಟೇ ಹೇಳುವೆ. ನಿಮ್ಮಲ್ಲಿ ಸಾಕಷ್ಟು ನೋವುಗಳಿವೆ ಆದರೆ ನಿಮ್ಮ ಕಷ್ಟ ಎಂಬ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿರುವೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ಶಿಕ್ಷಕರನ್ನು ಸನ್ಮಾಸಿ, ಬೇಡಿಕೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಬಿ.ಇಓ ಅಧಿಕಾರಿಗಳಾದ ಪದ್ಮನಾಭ ಕರಣಂ , ಖಾನಹೊಸಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಚೇತನ್ ಮತ್ತು ಉಪಾಧ್ಯಕ್ಷರು, ಡಿ ಎಸ್ಎಸ್ ತಾಲೂಕು ಸಂಚಾಲಕರು ಎಳೆನೀರು ಗಂಗಣ್ಣ ನೌಕರರ ಸಂಘದ ಅಧ್ಯಕ್ಷರು ಪಿ. ಶಿವರಾಜ್,ಸಮನ್ವಯ ಅಧಿಕಾರಿಗಳಾದ ಜಗದೀಶ್, ಮುಖಂಡರು ಶಶಿಧರ್ ಸದಸ್ಯರು , ಮುಖಂಡರು, ಶಿಕ್ಷಕರು ಉಪಸ್ಥಿತರಿದ್ದರು.