
ಹೊಸಪೇಟೆ: ದಿನಾಂಕ 17-08-2024 ರಂದು ಕೋಲ್ಕತ್ತಾ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪಿ.ಜಿ.ವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಹೊಸಪೇಟೆ,ವಿಜಯನಗರ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ವಿಜಯನಗರ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿತು.

ಪ್ರತಿಭಟನಾ ರ್ಯಾಲಿ ನಗರದ ಡಾ.ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭಗೊಂಡು, ಡಾ.ಅಂಬೇಡ್ಕರ್ ಸರ್ಕಲ್, ಪುನೀತ್ ರಾಜ್ಕುಮಾರ್ ಸರ್ಕಲ್, ಪುಣ್ಯಮೂರ್ತಿ ಸರ್ಕಲ್ ಮುಖಾಂತರ ಹಾಯ್ದು ವಡಕರಾಯ ಗುಡಿ ಹತ್ತಿರ ಕೊನೆಗೊಂಡಿತು. ದಾರಿಯುದ್ದಕ್ಕೂ ಪ್ರತಿಭಟನೆ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಲ್.ಆರ್.ಶಂಕರ್ನಾಯ್ಡ್ ರವರು ದಿನಾಂಕ:09-08- 2024 ರಂದು ಕೊಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರತ ಪಿ.ಜಿ.ವೈದ್ಯೆಯ ಮೇಲೆ ಜರುಗಿದ ಸಾಮೂಹಿಕ ಅತ್ಯಾಚಾರ ಇಡೀ ದೇಶದ ವೈದ್ಯ ಸಮೂಹವನ್ನು ಬೆಚ್ಚಿಬೀಳಿಸಿದೆ

ಇದೊಂದು ಹೇಯಕೃತ್ಯವಾಗಿದ್ದು ತಪ್ಪಿಸ್ಥರಿಗೆ ಕಾನೂನು ಮೂಲಕ ಶಿಕ್ಷೆ ನೀಡಬೇಕೆಂದು ಕೋರಿದರು.

ಭಾರತೀಯ ವೈದ್ಯ ಸಂಘದ ಹೊಸಪೇಟೆ ಶಾಖೆಯ ಅಧ್ಯಕ್ಷರಾದ ಡಾ.ಶ್ರೀನಿವಾಸ ದೇಶಪಾಂಡೆಯವರು ಈ ಘಟನೆ ಇಡೀ ವೈದ್ಯಕೀಯ ಸಮೂಹಕ್ಕೆ ಬಗೆದ ಅಪಚಾರ, ವೈದ್ಯ ವೃತ್ತಿ ನಿರತರಿಗೆ ಅಗೌರವ ಮತ್ತು ಅಭದ್ರತೆ ವಾತಾವರಣ ಸ್ಪಷ್ಟಗೊಂಡಿದೆ ಇದನ್ನು ಸಂಘವು ತೀವ್ರವಾಗಿ ಖಂಡಿಸುತ್ತಿದೆ ಎಂದು ತಿಳಿಸಿದರು. ಮಹಿಳಾ ವೈಧ್ಯಾಧಿಕಾರಿಗಳು ಸದರಿ ಘಟನೆಯನ್ನು ಉಗ್ರವಾಗಿ ಖಂಡಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದರು.

ಪ್ರತಿಭಟನೆ ನಂತರ ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ತಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ರ್ಯಾಲಿಯಲ್ಲಿ ಡಾ.ಬಿ.ಜಂಭಯ್ಯ ಅಧ್ಯಕ್ಷರು ವೈಧ್ಯಾದಿಕಾರಿಗಳ ಸಂಘ ವಿಜಯನಗರ ನೇತೃತ್ವ ವಹಿಸಿದ್ದರು.

ಪ್ರತಿಭಟನಾ ರ್ಯಾಲಿಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾದಿಕಾರಿಗಳ ಸಂಘ, ಪ್ರೇರಣಾ, ಭಾರತೀಯ ಮಕ್ಕಳ ಸಂಘ, ಭಾರತೀಯ ದಂತ ವೈಧ್ಯಕೀಯ ಸಂಘದ ಜೊತೆಗೆ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು, ಸಪ್ತಗಿರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ದೀಪಾಲಿ ಮತ್ತು ಮಲ್ಲಿಗೆ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಅಕ್ಕನ ಬಳಗ, ಮಹಿಳಾ ಸಮಾಜದ ಸದಸ್ಯರು,ಎನ್.ಸಿ.ಸಿ. ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.