
ಹೊಸಪೇಟೆ : ತಾಲೂಕಿನ ನಾಗೇನಹಳ್ಳಿ ಹತ್ತಿರದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾಲಘಟ್ಟ ದ ಮಕ್ಕಳು 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿಶೇಷ ಲೈವ್ ಪೇಂಟಿಂಗ್ ಅನ್ನು ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನೀಯರ ಭಾವ ಚಿತ್ರವಾದ ಮಹಾತ್ಮ ಗಾಂಧೀಜಿ, ಡಾ/ ಬಿ,ಆರ್ ಅಂಬೇಡ್ಕರ್ ,ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ಚಿತ್ರವನ್ನು ಸುಣ್ಣದ ಪುಡಿಯಿಂದ ಸುಂದರವಾಗಿ ಚಿತ್ರಿಸಿದರು.

ಎಂಟನೇ ತರಗತಿಯ ಹರ್ಷಿತ್ ಪಂಕಜ್. 10ನೇ ತರಗತಿಯ ಹೇಮಲತಾ ವಿದ್ಯಾರ್ಥಿಗಳು ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಅದ್ಭುತವಾಗಿ ಕಲಾ ಕೃತಿಯನ್ನು ರಚಿಸಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕ ವೃಂದದ ಪ್ರಶಂಸೆಗೆ ಪಾತ್ರರಾದರು.