ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಜಾಗತೀಕರಣ.ಯುವ ಸಮುದಾಯದ ಸವಾಲುಗಳ ವಿಚಾರ ಸಂಕೀರ್ಣ

Loading

ಕೊಟ್ಟೂರು : ದಿನಾಂಕ 13-8- 2024 ರಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಜಾಗತೀಕರಣದ ನಂತರದಲ್ಲಿ ಯುವ ಸಮುದಾಯದ ಸವಾಲುಗಳು ಎಂಬ ವಿಚಾರ ಸಂಕೀರ್ಣವನ್ನು ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಸಿ ಮೋಹನ್ ರೆಡ್ಡಿ ಮಾರ್ಗದರ್ಶನದಂತೆ ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ. ಎಂ ರವಿಕುಮಾರ್ ಮಾತನಾಡಿ ಇಂದಿನ ಯುವಕರು ಜಾಗತೀಕರಣದ ಯುಗದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವಂತಹ ಜ್ಞಾನವನ್ನು ಪಡೆದುಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳಲು ಕರೆ ನೀಡಿದರು .

ನಂತರ ವಿಶೇಷ ಉಪನ್ಯಾಸ ನೀಡಿದ ಡಾ. ಮಂಜುನಾಥ್ ಉಲವತ್ತಿ ಶೆಟ್ಟರ್ ರವರು ಜಾಗತೀಕರಣದ ನಂತರ ಯುಗದಲ್ಲಿ ಯುವ ಸಮುದಾಯ ಎದುರಿಸುವ ಸವಾಲುಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಮಾತನಾಡಿ ಯುವಕರಿಗೆ ದೇಶವನ್ನ ಬದಲಾಯಿಸುವ ಶಕ್ತಿ ಇದೆ ಸ್ವದೇಶಿ ಉತ್ಪಾದನೆ ಮಾಡಿ ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಲು ಜಾಗತೀಕರಣದ ಹೆಸರಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಯುವಕರು ನಿರುದ್ಯೋಗಿಯನ್ನಾಗಿ ಮಾಡುತ್ತವೆ ಇಂತಹ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಆತ್ಮಸ್ಥೈರದೊಂದಿಗೆ ಎದುರಿಸಲು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಜೆಬಿ ಸಿದ್ದನಗೌಡರು ಇತಿಹಾಸ ವಿಭಾಗದ ಮುಖ್ಯಸ್ಥರು ಪದವಿಪೂರ್ವ ಪ್ರಾಚಾರ್ಯರಾದ MH ಪ್ರಶಾಂತ್ ಕುಮಾರ್ IQAC ಅಧಿಕಾರಿಗಳಾದ ಪೃಥ್ವಿರಾಜ್ ಬೆಡ್ಜಾರ್ಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಶಿವಕುಮಾರ್ ಕೆ.ಕೊಟ್ರೇಶ್ ಶಿವಪ್ರಕಾಶ್ ಓ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ರಮೇಶ್ ಎಚ್ ನೆರವೇರಿಸಿ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಕೆ ಉಮೇಶ್ ಸ್ವಾಗತವನ್ನು ವಂದನಾರ್ಪಣೆಯನ್ನು ಹನುಮಂತಪ್ಪ ನೆರವೇರಿಸಿ ಕಾರ್ಯಕ್ರಮದ ಯಶಸ್ವಿ ಗೊಳಿಸಿದರು.

Leave a Reply

Your email address will not be published. Required fields are marked *