
ಹಗರಿಬೊಮ್ಮನಹಳ್ಳಿ : ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಇಂದು ಶನಿವಾರ ಮಧ್ಯಾಹ್ನ ನಾಗರಪಂಚಮಿ ಹಬ್ಬದ ಪ್ರಯುಕ್ತ ಗ್ರಾಮದ ಗ್ರಾಮೀಣ ಕ್ರೀಡಾಸಕ್ತರ ಬಳಗದ ಸದಸ್ಯರು ನಿಧಾನಗತಿಯ ಸೈಕಲ್ ರೇಸ್ ಸ್ಪರ್ಧೆಯನ್ನು ಆಯೋಜಿಸಿದ್ದರು.
ಸ್ಪರ್ಧೆಯು ಗ್ರಾಮದ ಹಳೇ ಗ್ರಾಮ ಪಂಚಾಯಿತಿಯಿಂದ ಅಗಸಿಯ ವರೆಗೆ ನಿಧಾನಗತಿಯಲ್ಲಿ ಸೈಕಲ್ ಚಲಾಯಿಸಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ಗ್ರದ ತಳವಾರ ಸೋಮಪ್ಪನ ಪುತ್ರ ಉದಯಕುಮಾರ್ (ಪ್ರಥಮ) ಉಪ್ಪಾರ ಮೂರುಮುದ್ದಿ ಹನುಮಂತನ ಪುತ್ರ ಯು.ಭರತ್ ದ್ವಿತೀಯ ಹಂಪಿನಕಟ್ಟಿ ಸೋಮಪ್ಪ ಅವರ ಪುತ್ರ, ಎಚ್ ಹುಲುಗಪ್ಪ ತೃತೀಯ ಬಹುಮಾನ ವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟದ ಸದಸ್ಯರಾದ ಯುವ ಮುಖಂಡರಾದ ಬಾವಿಕಟ್ಟಿ ಕೊಟ್ರೇಶ್, ಬಟರ್ ಕುಬೇರಪ್ಪ ಗ್ರಾಮ ಪಂಚಾಯತಿ ಸದಸ್ಯರು ಸಿಎಲ್ ಕುಮಾರ್ ಮುಖಂಡರು ಶೀಘ್ನಳ್ಳಿ ಚಂದ್ರಶೇಖರ್ ಮುಖಂಡರು , ಗೂಳಿ ಕೊಟ್ರೇಶ್, ತಳವಾರ್ ಸೋಮಶೇಖರ್ ಸೀಗನಹಳ್ಳಿ ಬಸವರಾಜ್ ಬುಗುಟಿ ಹನುಮಂತ ಹಂಪಿನಕಟ್ಟಿ ಪ್ರವೀಣ್ ಕುಮಾರ್ ಗೊಂದಲಿ ದೇವೇಂದ್ರ ಎಂ ಆನಂದ ಟಿ ರಾಘವೇಂದ್ರ ಗೊಂದಲ ಪಕೀರ ಕಟ್ರಳ್ಳಿ ಮಾಂತೇಶ ಸೇರಿದಂತೆ ಇನ್ನಿತರರು ಇದ್ದರು.
ವಿಜೇತರಿಗೆ ಪ್ರಥಮ 1500, ದ್ವಿತಿಯ 1000, ತೃತೀಯ 500 ರೂ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿನಲ್ಲಿಯೇ ಕಾಲ ಕಳೆಯುವ ಯುವ ಪೀಳಿಗೆಗೆ ಗ್ರಾಮೀಣ ಕ್ರೀಡೆ ಆಯೋಜಿಸುವ ಮೂಲಕ ಗ್ರಾಮದ ಗ್ರಾಮೀಣ ಗ್ರೀಡಾಕೂಟದ ಸದಸ್ಯರು ಅದ್ಭುತವಾದ ಕ್ರೀಡೆಯನ್ನು ಆಯೋಜಿಸಿದ್ದಾರೆ. ಇದರಿಂದ ಗ್ರಾಮೀಣ ಕ್ರೀಡೆಗಳ ಉಳಿವಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಕ್ರಿಕೆಟ್ ಕ್ರೀಡೆಯ ಜೊತೆಗೆ ಈರೀತಿಯ ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಗ್ರಾಮದ ಹಿರಿಯ ಪ್ರಶಂಸೆಗೆ ಕಾರಣವಾಗಿದೆ.
