
ಕೊಟ್ಟೂರು: ಕರ್ನಾಟಕ ಪತ್ರಕರ್ತರ ಸಂಘ ಮತ್ತು ತರ್ಲೆ ಕ್ರಿಕೆಟರ್ಸ್ ಶಿಕ್ಷಕರ ತಂಡದಿಂದ ಭಾನುವಾರ ತಾಲೂಕು ಕೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾಟದಲ್ಲಿ ತರ್ಲೆ ಕ್ರಿಕೆಟರ್ಸ್ ಶಿಕ್ಷಕರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪರಿಣಾಮವಾಗಿ ತಂಡ ನಿಗದಿತ 10 ಓವರ್ಗಳಲ್ಲಿ 5 ವಿಕೆಟ್ ಲಾಸ್, 73 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ಪತ್ರಕರ್ತರ ಸಂಘವೂ ಸಹ 2 ವಿಕೆಟ್ ಲಾಸ್ , 8 ಓವರ್ ಮೂರು ಬಾಲುಗಳಲ್ಲಿ 74 ರನ್ ಗಳಿಸಿ ಪಂದ್ಯ ಗೆಲುವು ಸಾಧಿಸಿ ಕೊಂಡರು
ತರ್ಲೆ ಕ್ರಿಕೆಟರ್ಸ್ ಶಿಕ್ಷಕರ ತಂಡದ ಬಾಣಕರ ಬಸವರಾಜ್ ಶಿಕ್ಷಕರು ಮಾತನಾಡಿ ತಾಲೂಕು ಕ್ರೀಡಾಂಗಣದಲ್ಲಿ ಬ್ಯಾಟ್ ಹಿಡಿದ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು. ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಇದೊಂದು ಸ್ನೇಹದ ಪಂದ್ಯ ಗೆಲುವು ಸೋಲು ಮುಖ್ಯವಲ್ಲ .ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಶಿಕ್ಷಕರು ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ಕೊಡುವುದು ಶಿಕ್ಷಕರ ಕರ್ತವ್ಯ ಎಂದರು
ಪ್ರಕಾಶ್ ಜೆ ಎಸ್ ಶಿಕ್ಷಕರು ಮಾತನಾಡಿ ಪತ್ರಕರ್ತರು ಸಮಾಜದ ಅನ್ಯಾಯದ ಪರ ಧ್ವನಿಯಾಗಿ ಲೇಖನಿ ಮುಖಾಂತರ ನ್ಯಾಯ ಕೊಡಿಸುವ ಪತ್ರಕರ್ತರು , ಶಿಕ್ಷಕರು ಇಬ್ಬರು ಸಮಾಜಕ್ಕೆ ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಉಪಾಧ್ಯಕ್ಷ ಕೆ ಸುವೇಭ್ ವಲಿ,ಶಿರಿಬಿ ಕೊಟ್ರೇಶ್,ಎಂ ಶ್ರೀನಿವಾಸ್, ಎಸ್ ಪ್ರಕಾಶ್, ಎಸ್ ಪರಶುರಾಮ್, ಎಚ್ ದಾದಾಪೀರ್,ತರ್ಲೆ ಕ್ರಿಕೆಟರ್ಸ್ ಶಿಕ್ಷಕರ ತಂಡದವರು ಇದ್ದರು.