ಬೀದಿ ನಾಯಿಗಳ ಹಾವಳಿ ಚಿಕ್ಕ ಹುಡುಗನಿಗೆ ಗಂಭೀರ ಗಾಯ

Loading

ಹೊಸಪೇಟೆ : ಚಿತ್ತವಾಡಿಗೆಯ ಒಂದನೇ ವಾರ್ಡಿನ ಕಾಕರ ಓಣಿ ಏರಿಯಾದ ಚಿಕ್ಕ ಹುಡುಗನಿಗೆ ಬಿದಿ ನಾಯಿ ಕಚ್ಚಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಸಾರ್ವಜನಿಕ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗುವಿನ ಮುಖದ ಮೇಲೆ ತೀವ್ರ ಗಾಯವಾದ ಕಾರಣ ಮುಖದ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ಈ ವಿಷಯವನ್ನು ತಿಳಿದ ಮಾನ್ಯ ಶಾಸಕರು ಹೆಚ್ ಆರ್ ಗವಿಯಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಗೆ ತೆರಳಲು ಸೂಚಿಸಿದರು. ಹಾಗೂ ಶಾಸಕರು ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಾಯ ಮಾಡಿದರು.

Leave a Reply

Your email address will not be published. Required fields are marked *