ಕರ್ನಾಟಕ ಪತ್ರಕರ್ತರ ಸಂಘ ಮತ್ತು ಹಸಿರು ಹೊನಲು ತಂಡ ಕ್ರಿಕೆಟ್ ಪಂದ್ಯ ರೋಚಕದಿಂದ ಡ್ರಾ

Loading

ಕೊಟ್ಟೂರು: ಕರ್ನಾಟಕ ಪತ್ರಕರ್ತರ ಸಂಘ ಮತ್ತು ಹಸಿರು ಹೊನಲು ತಂಡದಿಂದ ಭಾನುವಾರ  ತಾಲೂಕು ಕೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಿತು. ಕರ್ನಾಟಕ ಪತ್ರಕರ್ತರ ಸಂಘ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪರಿಣಾಮವಾಗಿ ಹಸಿರು ಹೊನಲು ತಂಡ ನಿಗದಿತ ೧೦ ಓವರ್‌ಗಳಲ್ಲಿ ೮೪ ರನ್ ಗಳಿಸಿ ಬೃಹತ್ ಮೊತ್ತ ಪೇರಿಸಿದರು. ಇದಕ್ಕೆ ಉತ್ತರವಾಗಿ ಕರ್ನಾಟಕ ಪತ್ರಕರ್ತರ ಸಂಘವೂ ಸಹ ೧೦ ಓವರ್‌ಗಳಲ್ಲಿ ೮೪ ರನ್ ಗಳಿಸಿದ ಪರಿಣಾಮ ಪಂದ್ಯ ಟೈ ನಲ್ಲಿ ಮುಕ್ತಾವಾಯಿತು. ದಶಕಗಳ ನಂತರ ಬ್ಯಾಟ್ ಹಿಡಿದ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು. ಪಂದ್ಯ ಮುಗಿದ ಬಳಿಕ ಹಸಿರು ಹೊನಲು ತಂಡದ ನಾಗರಾಜ್ ಬಂಜಾರ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಚಿರಿಬಿ ಕೊಟ್ರೇಶ್ ಮಾತನಾಡುತ್ತ, ಇದೊಂದು ಸ್ನೇಹದ ಮ್ಯಾಚ್ ಎಂದು ಹೇಳಿದರು.

ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಅವರು ಹಸಿರು ಹೊನಲು ತಂಡದವರಿಗೆ ಜುಲೈ 6 ನೆಡೆದ ಪತ್ರಿಕಾ ದಿನಾಚರಣೆ ನಿಮಿತ್ತ ಸನ್ಮಾನ ಮಾಡಲಾಯಿತು.

Leave a Reply

Your email address will not be published. Required fields are marked *