
ಹಗರಿಬೊಮ್ಮನಹಳ್ಳಿ : ನಗರದ ಹೊರ ವಲಯದಲ್ಲಿರುವ ರೈಲ್ವೆ ಗೇಟ್ ಹಾಗೂ ರಾಮನಗರ ಬಸ್ ನಿಲ್ದಾಣದ ಬಳಿ ಇರುವ ಮತ್ತು ನೇತಾಜಿ ರಸ್ತೆಯಲ್ಲಿರುವ ಎರಡು ರೈಲ್ವೆ ಗೇಟ್ ಗಳಿಂದ ದಿನಂಪ್ರತಿ ಓಡಾಡುವ ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗಿತ್ತು. ರೈಲು ಬಂದಾಗಲೆಲ್ಲ ಈ ಮೂರು ರೈಲ್ವೆ ಗೇಟ್ ಬಳಿ ಸಾರ್ವಜನಿಕರ ಸಂಚಾರ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಎಲ್ಲಿಗಾದರೂ ಹೋಗಲಿಕ್ಕೆ ಬರಲಿಕ್ಕೆ ಉಂಟಾಗಿತ್ತು.ತುರ್ತು ಸಂದರ್ಭದಲ್ಲಿ ರೈಲ್ವೆ ಘಟಕಗಳಲ್ಲಿ ಸಂಚರಿಸಲು ಸಾರ್ವಜನಿಕರು ಒತ್ತಡಕ್ಕೆ ಸಿಲುಕ ಬೇಕಾಗಿತ್ತು. ಒಮ್ಮೆಮ್ಮೆ ರೈಲ್ವೆ ಕ್ರಾಸಿಂಗ್ ಇರುವ ಸಂದರ್ಭದಲ್ಲಿ ಅರ್ಧ ತಾಸುಗಟ್ಟಲೆ ಕಾಯಬೇಕಾದಂತ ಪರಿಸ್ಥಿತಿನು ಇತ್ತು.
ಈ ವಿಷಯವಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹಗರಿಬೊಮ್ಮನಹಳ್ಳಿಯ ರೈಲ್ವೆ ಹೋರಾಟ ಸಮಿತಿಯವರು ಹಾಗೂ ಜನಪ್ರತಿನಿಧಿ ಗಳ ಸಾರ್ವಜನಿಕರು ಇವರ ಸತತ ಪ್ರಯತ್ನ ಫಲವಾಗಿ ರೈಲ್ವೆ ಬೋರ್ಡು ವತಿಯಿಂದ ಟ್ರಾಫಿಕ್ ಸಮಸ್ಯೆ ಬಗ್ಗೆ ಪೊಲೀಸ್ ಠಾಣೆಗೆ ಸ್ಥಳ ಪರಿಶೀಲನೆ ಮಾಡಿ

ಮಹಜರು ಮಾಡಲು ವರದಿ ಕೇಳಿದ್ದರಿಂದಾಗಿ ಪಟ್ಟಣದ ಮೂರು ರೈಲ್ವೆ ಗೇಟ್ ನ ವರದಿ ಸಂಗ್ರಹಿಸಲು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ್ ಅಡವಿಬಾವಿ ನೇತೃತ್ವದ ಅಧಿಕಾರಿಗಳ ತಂಡ ಇಲಾಖೆಯ ಸಿಬ್ಬಂದಿಗಳಿಂದ ಸ್ಥಳ ಮಹಜರು ಮಾಡಲಾಯಿತು.
ಈ ವೇಳೆ ಮಠಾಧೀಶರು, ರೈಲ್ವೆ ಹೋರಾಟ ಸಮಿತಿಯವರು, ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು .