ತಂಬ್ರಹಳ್ಳಿ ಗ್ರಾಮದಲ್ಲಿ ವೀ.ವಿ. ಸಂಘದಿಂದ ಹಾಲಿ ಇರುವ ಕಾಲೇಜಿನಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗ ಮತ್ತು ಹೊಸದಾಗಿ ಕಿಂಡರ್ ಗಾರ್ಡನ್ ಶಾಲೆಯನ್ನು ಆರಂಭಿಸಲು – ಅಕ್ಕಿ ತೋಟೇಶ್ ಮನವಿ

Loading

ಬಳ್ಳಾರಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ  ತಾಲೂಕು ತಂಬ್ರಹಳ್ಳಿ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘವು ಕಳೆದ 56 ವರ್ಷಗಳ ಹಿಂದೆ (1968) ಪ್ರೌಢಶಾಲೆಯನ್ನು ಮತ್ತು 27 ವರ್ಷಗಳ ಹಿಂದೆ (1997) ಪಿ.ಯು.ಸಿ. ಕಾಲೇಜನ್ನು ಪ್ರಾರಂಭಿಸಿ ನಮ್ಮ ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿಗೆ ವೀ.ವಿ. ಸಂಘದ ಕೊಡುಗೆ ಅಪಾರವಾಗಿದ್ದು, ಅಭಿನಂದನಾರ್ಹವಾಗಿದೆ.

ಕಳೆದ 29 ವರ್ಷಗಳ ಹಿಂದೆ ಆರಂಭಿಸಿದ ಅಕ್ಕಿ ಬಸಮ್ಮ ತೋಟಪ್ಪ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಅದರಲ್ಲಿ ಬಾಲಕಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಗದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ವಿಭಾಗದ ಬೇಡಿಕೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಇಲ್ಲದೇ ವಂಚಿತರಾಗಿರುವುದರಿಂದ ದೂರದ ಬೇರೆ ಪಟ್ಟಣಗಳಿಗೆ ಹೋಗದೆ ಪಿ.ಯು.ಸಿ. ವಿಜ್ಞಾನ ಶಿಕ್ಷಣದಿಂದ ವಂಚಿತರಾಗಿರುತ್ತಾರೆ.

ನಮ್ಮ ಗ್ರಾಮದಲ್ಲಿ ಬಿ.ಸಿ.ಎಂ. ಇಲಾಖೆಯಿಂದ 150 ಸಂಖ್ಯೆಯುಳ್ಳ ಬಾಲಕಿರಯ ಮೆಟ್ರಿಕ್ ನಂತರದ ಸುಸಜ್ಜಿತ ಕಟ್ಟಡದ ವಿದ್ಯಾರ್ಥಿ ನಿಲಯ ಇರುತ್ತದೆ. ಆದುದರಿಂದ ಪ್ರಸಕ್ತ 2025-26ನೇ ಶೈಕ್ಷಣಿಕ ವರ್ಷದಿಂದ ಹಾಲಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಿ ನಮ್ಮ ಭಾಗದ ಅನೇಕ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಅಕ್ಕಿ ತೋಟೇಶ್ ಅವರು ಶ್ರೀ ಡಾ.ಕಣೇಕಲ್ ಮಹಾಂತೇಶ್ ಅಧ್ಯಕ್ಷರು ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ.ಅವರಿಗೆ ಮನವಿಯನ್ನು ಸಲ್ಲಿಸಿದರು.

ಅದೇ ರೀತಿ ತಂಬ್ರಹಳ್ಳಿಯ ಪಿ.ಯು.ಸಿ. ಕಾಲೇಜಿನ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅಂದಿನ ಬಳ್ಳಾರಿ ಲೋಕಸಭಾ ಸದಸ್ಯರಿಂದ ಕಿಂಡರ್ ಗಾರ್ಡನ್ ಶಾಲೆಯ ಪ್ರಾರಂಭೋತ್ಸವ ಚಾಲನೆ ನೀಡಲಾಯಿತು.

ಅದನ್ನು ಸಹ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಂಬ್ರಹಳ್ಳಿ ಗ್ರಾಮದಲ್ಲಿ ವೀ.ವಿ. ಸಂಘದಿಂದ ಬಹು ಬೇಡಿಕೆ ಇರುವ ಕಿಂಡರ್ ಗಾರ್ಡನ್ 2025-26ನೇ ಶೈಕ್ಷಣಿಕ ವರ್ಷದಿಂದ ಆರಂಭಿಸಿ ಸುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಶಿಕ್ಷಣಕ್ಕೆ ತಾವುಗಳು ಸಹಕಾರಿಯಾಗಬೇಕೆಂದು ಗ್ರಾಮದ ಸದಸ್ಯರು ಮತ್ತು ಗ್ರಾಮಸ್ಥರು ಮನವಿ ಯನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಅಕ್ಕಿ ತೋಟೇಶ್ ಅವರು ಮತ್ತು ಮೈಲಾರ ಶಿವುಕುಮಾರ್.ಗಾದಿ ಲಿಂಗಪ್ಪ.ಸುರೇಶ್ ಇತರರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *