ಪ್ರವರ್ಗ 3ಯಲ್ಲಿ ಬರುವ ಜನಾಂಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು 2a ಜಾತಿ ಪ್ರಮಾಣ ಪತ್ರ ವಿತರಿಸದಂತೆ ಒತ್ತಾಯಿಸಿ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಪ್ರತಿಭಟನೆ

Loading

ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗೆ ಸೇರಿದ ಒಂದು ಜಾತಿಯ ಸುಳ್ಳು ದಾಖಲಾತಿಗಳನ್ನು ನೀಡಿ ಹಿಂದುಳಿದ ಜಾತಿಗೆ ಸೇರಿದವರೆಂದು ಪ್ರಮಾಣ ಪತ್ರ ಪಡೆದು ರಾಜಕೀಯವಾಗಿ ಹಾರ್ಥಿಕವಾಗಿ, ಶೈಕ್ಷಣಿಕವಾಗಿ ,ಹಿಂದುಳಿದ ಜಾತಿಯ ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಎಂದು ಮಂಗಳವಾರ ರಂದು ಕಾನಹೊಸಹಳ್ಳಿಯ ನಾಡಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು.


ಯಾವುದೇ ಜಾತಿ ಪ್ರಮಾಣ ಪತ್ರ ಪಡೆಯಬೇಕೆಂದರೆ ಸರ್ಕಾರ ಕೆಲವಾರು ನಿಯಮಗಳ ಮೂಲಕ ಕೈಗೊಂಡು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದವರ ತಂದೆ ತಾಯಿ ಜಾತಿ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರ ನೀಡಬೇಕು ಅಂತ ಕಾನೂನು ಇದೆ.


ಆದರೆ ಹೋರಾಟಗಾರರು ಈ ಕುರಿತು ಕಾನೂನು ಉಲ್ಲಂಘನೆ ಮಾಡಿ ಕೂಡ್ಲಿಗಿತಾಲೂಕಿನಲ್ಲಿ ಕೆಲವರು ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗಾಣಿಗ ವೀರಶೈವ ಎಂದು ಪ್ರಮಾಣ ಪತ್ರ ಪಡೆಯುವುದು ಖಂಡನೀಯ ಎಂದು ಹೋರಾಟಗಾರರು ಕಾನಹೊಸಳಿಯ ನಾಡಕಚೇರಿ ಮುಂದೆ ಪ್ರತಿಭಟನೆ ಮಾಡುವುದರೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಹೋರಾಟದಲ್ಲಿ ಹಿಂದುಳಿದ ಜಾತಿಗಳ ಹಲವಾರು ಜಾತಿಯ ಹೋರಾಟಗಾರರು ತಮ್ಮ ತಮ್ಮ ಕುಲ ಕಸುಬುಗಳೊಂದಿಗೆ ನಾಡಕಚೇರಿಯ ಮುಂದೆ ದೌಡಾಯಿಸಿ ಪ್ರತಿಭಟನೆ ಮಾಡುವುದರೊಂದಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವಂತವರ ಕಾನೂನು ರೀತ್ಯಾ ಅಂತವರ ವಿರುದ್ಧ ಕ್ರಿಮಿನಲ್ ಮೊಖದಮೆ ದಾಖಲಿಸುವಂತೆ ಮನವಿ ಸಲ್ಲಿಸುವುದರೊಂದಿಗೆ ಪ್ರತಿಭಟನೆ ಮಾಡಲಾಯಿತು.


ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪ್ರಮುಖ ಹೋರಾಟಗಾರರಾದ ಬಡ್ಡಿ ಬಸವರಾಜ್ ಹಾಗೂ ಗೌರವಾಧ್ಯಕ್ಷರಾದ ಗುರುಲಿಂಗಪ್ಪ ಕೌಶಲ್ಯದ ಮಾರೇಶ್ , ಜಿಲ್ಲಾ ಕಾರ್ಯದರ್ಶಿಯಾದ ಲೆಕ್ಕಜ್ಜಿ ಮಲ್ಲಿಕಾರ್ಜುನ್, ಎಸ್. ಜಯಣ್ಣ ತಾಲೂಕು ಕಾರ್ಯದರ್ಶಿಯಾದ ಕೊಟ್ರೇಶ್, ರಾಘವೇಂದ್ರ, ಬಿ ಮಂಜುನಾಥ್, ಮಾತಣ್ಣ, ಹಡಪದ ನಾಗರಾಜ್, ಟಿ. ರಾಜಣ್ಣ, ಇನ್ನು ಹತ್ತು ಹಲವಾರು ಅನೇಕ ಗ್ರಾಮಗಳಿಂದ ನೆರೆದಂತ ಹೋರಾಟಗಾರರು ಭಾಗವಹಿಸಿದರು.

Leave a Reply

Your email address will not be published. Required fields are marked *