ಹಗರಿಬೊಮ್ಮನಹಳ್ಳಿ:ಪಟ್ಟಣದ ಪೊಲೀಸ್ ಠಾಣೆಯಲ್ಲಿ 6 ಬೈಕ್ ಸೇರಿದಂತೆ ಒಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ತಿಳಿಸಿದರು.
ಕೊಟ್ಟೂರು ತಾಲೂಕಿನ ಮಲ್ಲನಾಯಕನ ಹಳ್ಳಿಯ ನಿವಾಸಿ ಪ್ರಶಾಂತನನ್ನು ಬಂಧಿಸಲಾಗಿದೆ. ಮಾ. 12ರಂದು ಬೆಳಗ್ಗೆ 6 ಗಂಟೆಗೆ ಸಂತೆ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪ್ರಕರಣ ದಾಖಲಿಸಿಕೊಂಡ ವೃತ್ತ ನಿರೀಕ್ಷಕರಾದ ವಿಕಾಸ್ ಪಿ. ಲಮಾಣಿ ಪಿಎಸ್ಐ ಬಸವರಾಜ ಅಡವಿಬಾವಿ ಅವರ ಸಾರಥ್ಯದಲ್ಲಿ ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿ ಬಾಬು, ಹೆಚ್ಚುವರಿ ಎಸ್ಟಿ ಸಲೀಂ ಪಾಷಾ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಕೊಟ್ಟೂರು ತಾಲೂಕಿನ ಮಲ್ಲನಾಯಕನ ಹಳ್ಳಿಯ ನಿವಾಸಿ ಆರೋಪಿ ಪ್ರಶಾಂತನನ್ನು ಬಂಧಿಸಿ 6 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪತ್ತೆ ಕಾರ್ಯದಲ್ಲಿ ವೆಂಕಟೇಶ್ ನಾಯಕ್, , ವೀರಣ್ಣದಶರಥ ವೀರ ಪೂರ್ವಚಾರಿ, ಕಿರಣ್ ಕುಮಾರ್, ಸಿದ್ದೇಶ್, ವಿನಾಯಕ, ಪರಶುರಾಮ್, ದೊಡ್ಡಬಸಪ್ಪ ಭಕ್ತರ, ಬಾಲರಾಜ್, ಮಹೇಶ್, ಹನುಮಂತಪ್ಪ ಉಪಸ್ಥಿತರಿದ್ದರು.