
ವಿಜಯ ನಗರ ಜಿಲ್ಲೆ ಕೂಡ್ಲಿಗಿ: ಪಟ್ಟದ ಸಂಡೂರ ರಸ್ತೆಯಲ್ಲಿ ಸೇವಾಲಾಲ್ ಸರ್ಕಲ್ ನಿಂದ ಶ್ರೀ ದೇವಿ ಗುಳೇದ ಲಕ್ಕಮ್ಮ ದೇವಸ್ಥಾನದ ವರೆಗೆ ಹೋಗುವಂತ ದಾರಿಯು ಸರಿಸುಮಾರು ಪೂರ್ವ ದಿಂದಲೂ ಮಣ್ಣಿನ ದಾರಿ ಮಾತ್ರ ಇದ್ದು ಈ ಶ್ರೀ ದೇವಿ ಗುಳೇದ ಲಕ್ಕಮ್ಮ ದೇವಿಯ ಪ್ರತಿ ವರ್ಷ ಕೊಮ್ಮೆ ಕೂಡ್ಲಿಗಿ ಪಟ್ಟಣ ದ ಜನತೆ ಒಂದು ದಿನದ ಹಬ್ಬ ವಾಗಿ ಪಟ್ಟಣದಲ್ಲಿ ಇರದೇ. ಎಲ್ಲಾ ಸಮುದಾಯದ ಜನರು ಊರನ್ನು ಬೀಡು ಬಿಡುತ್ತಾರೆ.ಪುರಾತನ ಸಂಸ್ಕೃತಿ ಯ ಆಚರಣೆಯನ್ನು ಕೂಡ್ಲಿಗಿ ಪಟ್ಟಣದ ಸರ್ವ ಸಮುದಾಯದ ಜನತೆ ಬೆಳಿಗ್ಗೆ ಯಿಂದ ಸಾಯಂಕಾಲ ದವರೆಗೂ ತಮ್ಮ ತಮ್ಮ ಮನೆಗಳಲ್ಲಿ ಸಿಹಿ, ಕಾರ ಹೀಗೆ ವಿವಿಧ ರೀತಿಯ ಅಡುಗೆ ಮಾಡಿಕೊಂಡು ಊರ ಒಳಗಡೆ ಇರದೇ ಊರನ್ನು ಬಿಟ್ಟು ಕೂಡ್ಲಿಗಿ ಸುತ್ತ ಮುತ್ತಲು ಮರಗಳ ಕೆಳಗೆ ಟೆಂಟ್ ಗಳನ್ನು ಹಾಕಿಕೊಂಡು ತಮ್ಮ ತಮ್ಮ ಕುಟುಂಬ ಗಳ ಜೊತೆಗೆ ಒಂದು ದಿನದ ಪ್ರವಾಸ ವಾಗಿ ಊರ ಹೊರಗೆ ಮರಗಳ ತೊಟು ಗಳಲ್ಲಿ ಕಳಕಳೆದು ಶ್ರೀ ದೇವಿ ಗುಳೇದ ಲಕ್ಕಮ್ಮ ನ ಪಾತ್ರರಾಗುತ್ತಾರೆ.
ಹಾಗೆ ಹಬ್ಬವಾಗಿ ಆಚರಣೆ ಮಾಡುತಾರೇ
ಹಾಗೆ ಜನತೆಯ ಬಹು ಮುಖ್ಯ ಬೇಡಿಕೆ ಯಾಗಿದ್ದ ದಾರಿಯ ಸಮಸ್ಯೆ ಯನ್ನು ಮಾನ್ಯ ಶಾಸಕರ ಬಳಿ ಕೂಡ್ಲಿಗಿ ಪಟ್ಟಣದ ಪ್ರಮುಖ ಮುಖಂಡ ರುಗಳು ಬೇಡಿಕೆ ಇಟ್ಟಾಗ ಮಾನ್ಯ ಎನ್ ಟಿ ಶ್ರೀನಿವಾಸ್ ಶಾಸಕರು ಸರಿಸುಮಾರು ದಾರಿಗಾಗಿ 2023-24 ನಗರೋತ್ತಾನ ಇಲಾಖೆಯಿಂದ 2.5 ಕೋಟಿಗಳು ಸಂಪೂರ್ಣ ರಸ್ತೆ ಹಾಗದಿದ್ದಕ್ಕೆ ಪುನಃ ಮುಂದುವರೆದ ಭಾಗವಾಗಿ ಹಾಗೂ 2024-25 ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆಯಿಂದ ಯಿಂದ 3 ಕೋಟಿಗಳು ಸುಸಜ್ಜಿತ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾನ್ಯ ಕೂಡ್ಲಿಗಿ ಜೊತೆಗೆ
ಸಂಡೂರಿನ ಶಾಸಕರು ಅನ್ನಪೂರ್ಣ ತುಕಾರಾಂ,ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರು ಶಿವಪ್ಪ ನಾಯಕ, ಹಾಗೂ ಕರ್ನಾಟಕ ಸರ್ಕಾರಿ ಪೌರಕಾರ್ಮಿರ ಸಂಘದ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ, ಬಡೇಲಾಡಕು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಜ್ಯೋತಿ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗುರುಸಿದ್ದನಗೌಡ್ರು, ಜಿಂಕಲ್ ನಾಗಮಣಿ,ದಾಣಿ ರಾಘವೇಂದ್ರ, ತುಪ್ಪಕ್ಕನಹಳ್ಳಿ ರಮೇಶ್, ಡಿ. ಎಚ್. ದುರುಗೇಶ್ ವಕೀಲರು,ನಲ್ಲಾಮುತ್ತಿ ದುರುಗೇಶ್,ಇನ್ನೂ ಅನೇಕ ಮುಂತಾದ ಮುಂಖಂಡರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ