
ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀವೆಂಕಟೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ಜಾತ್ರೆಗೆ ಬಂದ ಭಕ್ತರಿಗೆ ಅನುಕೂಲ ಕಲ್ಪಿಸಲು ನಾಲ್ಕು ಕಡೆ ಶುದ್ದ ಕುಡಿಯುವ ನೀರಿನ ಅರವಟಿಕೆ ಮತ್ತು ಬಂದ ಭಕ್ತರಿಗೆ ಬಿಸಿಲಿನ ತಾಪ ತಣಿಸಲು ಎರಡು ಕಡೆ ಮಜ್ಜಿಗೆ ಅರವಟಿಕೆ ಸ್ಥಾಪಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ ಮರಿರಾಮಣ್ಣ ತಿಳಿಸಿದರು. ಸೋಮವಾರ ಜಾತ್ರೆಯ ನಿಮಿತ್ತ ಭಕ್ತರ ಅನುಕೂಲಕ್ಕಾಗಿ ಸ್ಥಾಪಿಸಲಾದ ಈ ಅರವಟಿಕೆಗಳ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶುದ್ದ ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಿಸುವ ಸೇವಾ ಕಾರ್ಯ ಮೂರು ದಿನಗಳ ಕಾಲ ಇರಲಿದ್ದು ಶ್ರೀಸ್ವಾಮಿಯ ಜಾತ್ರೆಗೆ ಬರುವ ಭಕ್ತರು ಸದುಪಯೋಗ ಪಡಿಸಿಕೊಳ್ಳಿ ಎಂದರು. ಮಾಜಿ ಜಿಪಂ ಸದಸ್ಯ ಅಕ್ಕಿ ತೋಟೇಶ್, ಮುಖಂಡರಾದ ಡಿಶ್ ಮಂಜುನಾಥ, ಕೋಗಳಿ ಹನುಮಂತಪ್ಪ, ರೋಹಿತ್, ಬಾಲರಾಜ ಸೇರಿದಂತೆ ಇತರರು ಇದ್ದರು.