
ವಿಜಯನಗರ (ಹೊಸಪೇಟೆ) : ಫೇಬ್ರುವರಿ 3 ರಂದು ಹನುಮನಹಳ್ಳಿ ಮತ್ತು ಡಣಾಪುರ 114 ಗ್ರಾಮದ ಸರ್ಕಾರಿ ಶಾಲೆ ಸಭಾಂಗಣದಲ್ಲಿ ಶ್ರೀ ಸಿದ್ದರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘ (ರಿ) ಹಂಪಿ ಹಾಗೂ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್(ರಿ) ಇವರ ವತಿಯಿಂದ ಹೆಣ್ಣು ಮಕ್ಕಳಿಗೆ ಬಟ್ಟೆ ಮತ್ತು ಬಾಳೆ ನಾರಿನಿಂದ ಮಾಡಿದ ಪ್ಯಾಡ್ ಗಳ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಭಾಗ್ಯ ಅವರು ಮಾತನಾಡಿ ಹಂಪಿಯಿಂದ ಹನುಮನಹಳ್ಳಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಋತುಚಕ್ರ ಆದ ಸಂದರ್ಭದಲ್ಲಿ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಬಟ್ಟೆಯಿಂದ ತಯಾರಿಸಿದ ಪ್ಯಾಡ್ ಹೇಗೆ ಉಪಯೋಗಿಸ ಬಹುದು ಶುಚಿತ್ವ ಮಾಡಿ ಬಿಸಿಲಿನಲ್ಲಿ ಒಣಗಿಸಿ ಮರುಬಳಕೆ ಮಾಡಬಹುದು. ನೈರ್ಮಲ್ಯದಿಂದ ಪರಿಸರದಲ್ಲಿ ಉಪಯೋಗಿಸ ಬಹುದಾದ ಪ್ಯಾಡ್ ಬಗ್ಗೆ ಮಾಹಿತಿ ನೀಡಿದರು ಹಾಗೂ ಪ್ರಾಕೃತಿಕವಾಗಿ ದೊರೆಯುವ ಬಾಳೆದಿಂಡಿನಿಂದ ಹಲವಾರು ವಸ್ತುಗಳನ್ನು ಮಾಡಬಹುದು ಎಂದು ಮಕ್ಕಳಿಗೆ ತಿಳಿಯಪಡಿಸಿದರು.

ಈ ಕಾರ್ಯಕ್ರಮಕ್ಕೆ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪಿ.ಸಿ.ಶಾಂತ ಶ್ರೀ ಸಿದ್ಧರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘದ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮತಿ ವಿ ಭಾಗ್ಯ ಲಕ್ಷ್ಮಿ ಮತ್ತು ಶ್ರೀ ಮತಿ ಕವಿತಾ ಪರಮೇಶ್ವರ್ ಹಾಗೂ ಡಣಾಪುರ, ಹನುಮನಹಳ್ಳಿಯ ಶಿಕ್ಷಕಿಯರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.