ಬೀದಿನಾಯಿಗಳ ಹಾವಳಿಗೆ ಕಡಿವಾಣದ ಕ್ರಮ : ಮುಖ್ಯಾಧಿಕಾರಿ ನಸ್ರುಲ್ಲಾ

Loading

ಕೊಟ್ಟೂರು : ಪಟ್ಟಣದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಮಿತಿಮೀರಿದ್ದು, ವಯೋವೃದ್ಧರ, ಮಕ್ಕಳ ಓಡಾಟಕ್ಕೆ ನಾಯಿಗಳು ವಿಪರೀತ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ, ಪತ್ರಿಕಾ ವರದಿಗಳಿಂದ ಎಚ್ಚೆತ್ತ ಪಟ್ಟಣ ಪಂಚಾಯಿತಿ ಪಟ್ಟಣದ ಸಾರ್ವಜನಿಕರ ಹಾಗೂ ಸಮಾಜದ ಮುಖಂಡರ ಮನವಿ ಮೇರೆಗೆ ಮುಖ್ಯಾಧಿಕಾರಿ ನಸ್ರುಲ್ಲಾ ರವರು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬೀದಿನಾಯಿಗಳಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ಅವು ಕಡಿದರೂ ಯಾವುದೇ ಮಾರಣಾಂತಿಕ ಹಾನಿಯಾಗುವುದಿಲ್ಲವೆಂದು ಅಲ್ಲದೇ, ಬೀದಿ ನಾಯಿಗಳನ್ನು ನಿಯಂತ್ರಣಸಲು ಹದಿನೈದು ದಿನಗಳೊಳಗಾಗಿ ಬೀದಿನಾಯಿಗಳ ಹಾವಳಿ ತಡೆಯಲು ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ರುಲ್ಲಾ ತಿಳಿಸಿದರು.

Leave a Reply

Your email address will not be published. Required fields are marked *