
ಕೊಟ್ಟೂರು : ನಿಜಶರಣ ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಆಗ ಅನುಸರಿಸುತ್ತಿದ್ದ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ಟೀಕಿಸಿದರು ಎಂದು ತಹಶೀಲ್ದಾರ್ ಅಮರೇಶ್ ಜಿಕೆ
ಹೇಳಿದರು
ಕೊಟ್ಟೂರು ತಾಲೂಕು ಕಚೇರಿಯಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಯಿತು.
ಅಂಬಿಗರ ಚೌಡಯ್ಯ ಅವರು 12ನೇ ಶತಮಾನದ ಪ್ರಮುಖ ಸಂತರಾಗಿದ್ದು, ಕುರುಡು ನಂಬಿಕೆಗಳನ್ನು ಅನುಸರಿಸುತ್ತಿರುವವರನ್ನು ಟೀಕಿಸಿ ಹಲವಾರು ವಚನಗಳನ್ನು ಬರೆದಿದ್ದಾರೆ.
ಅಂಬಿಗರ ಚೌಡಯ್ಯ ಸಮಾಜಕ್ಕೆ ಮಾರ್ಗದರ್ಶನ ಮಾಡಿದಂತೆ ಬದುಕಿದರು. ಯುವ ಪೀಳಿಗೆ ವಚನಗಳ ಅರ್ಥವನ್ನು ಅರಿತು ಉತ್ತಮ ಸಮಾಜಕ್ಕಾಗಿ ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು.
ಎಲ್ಲ ಸಾಹಿತ್ಯಕ್ಕಿಂತ ವಚನ ಸಾಹಿತ್ಯ ಶ್ರೇಷ್ಠವಾಗಿದ್ದು, ಸಮಾಜ ಸುಧಾರಕ ಬಸವೇಶ್ವರರ ನೇತೃತ್ವದಲ್ಲಿ 12ನೇ ಶತಮಾನದ ಕ್ರಾಂತಿ ನಡೆದ ಸಂದರ್ಭದಲ್ಲಿ ವಚನಗಳು ರಚಿತವಾದವು ಎಂದು ತಹಶೀಲ್ದಾರ್ ಅಮರೇಶ್ ಜಿಕೆ ಅವರು ಮಾತನಾಡಿ ಹೇಳಿದರು.
ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.