ನಾಯಿ ಕಡಿತಕೊಳ್ಳಲಾದ ಬಾಲಕಿಗೆ 5000 ಪರಿಹಾರ ನೀಡಿ ಮಾನವೀಯತೆ ಮೆರೆದ ಪುರಸಭಾ ಅಧ್ಯಕ್ಷ ಮರಿ ರಾಮಣ್ಣ.

Loading

ಹಗರಿಬೊಮ್ಮನಹಳ್ಳಿ : ಸೋನಿಯಾ ಗಾಂಧಿನಗರದ ಮಂಜುನಾಥ್ ಗೀತಮ್ಮ ಪುತ್ರಿ ಯಾದ ಶ್ರೇಯ ಎಂಬ ಐದು ವರ್ಷದ ಬಾಲಕಿಗೆ ನೆನ್ನೆ ಬೀದಿ ನಾಯಿ ಕಚ್ಚಿ ಗಾಯಗಳಾಗಿತ್ತು . ಪುರಸಭಾ ಅಧ್ಯಕ್ಷರಾದ ಮರಿ ರಾಮಣ್ಣನವರು ಗಾಯಗೊಂಡ ಬಾಲಾಜಿಯ ಚಿಕಿತ್ಸೆಗಾಗಿ 5000 ವೈಯಕ್ತಿಕ ಪರಿಹಾರವನ್ನು ನೀಡಿ ಮಾನವೀಯತೆ ಮೆರೆದರು. ಇದೇ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಿಸಲು ಪುರಸಭೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಸದಸ್ಯರಾದ ರಾಜೇಶ್ ಬ್ಯಾಡಗಿ, ನಾಗರಾಜ ಜನ್ನು, ಬಾಳಪ್ಪ, ಪುರಸಭೆ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಯು.ಬಾಬುವಲಿ, ತಾ.ಪಂ. ಮಾಜಿ ಸದಸ್ಯ ದೇವೇಂದ್ರಪ್ಪ, ಮುಖಂಡರಾದ ಅಲ್ಲಾಭಕ್ಷಿ, ಗುಂಡ್ರು ಹನುಮಂತಪ್ಪ ಇತರರಿದ್ದರು.

Leave a Reply

Your email address will not be published. Required fields are marked *