ಕೊಟ್ಟೂರು ನೇಕಾರರ ಸಹಕಾರ ಮತ್ತು ಮಾರಾಟ ಸಂಘಕ್ಕೆ ಅಧ್ಯಕ್ಷರಾಗಿ ವಕೀಲರು ಬಾವಿಕಟ್ಟಿ ಶಿವಾನಂದ ಆಯ್ಕೆ

Loading

“ಉಪಾಧ್ಯಕ್ಷರಾಗಿ ತೋಟದ ಹನುಮಂತಪ್ಪ ಅವಿರೋಧ ಆಯ್ಕೆ”

ಕೊಟ್ಟೂರು : ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಾವಿಕಟ್ಟಿ ಶಿವಾನಂದ, ಉಪಾಧ್ಯಕ್ಷರಾಗಿ ತೋಟದ ಹನುಮಂತಪ್ಪ ಗುರುವಾರ ಆಯ್ಕೆಯಾಗಿದ್ದು

ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘಕ್ಕೆ ನಿರ್ದೇಶಕರಾಗಿ ವಿ ಎಸ್ ಕೊಟ್ರೇಶ್,ರಾಂಪುರ ಬಸವರಾಜ, ದೇವರೆಡ್ಡಿ ವೆಂಕಟೇಶ್ , ಗಂಜಿ ದಿನೇಶ, ಪಟ್ಟಶಾಲಿ ನಿಂಗರಾಜ, ತೂಲಹಳ್ಳಿ ಬೊಮ್ಮಪ್ಪ,ಕಾಸಲ ಕೊಟ್ರೇಶ್ , ವಿ ಶಿವರಾಜ್, ಪದ್ಮಾವತಿ ಆರ್ ,ಬಿ. ಸುನಂದಾ, ಅವಿರೋಧವಾಗಿ ಆಯ್ಕೆಯಾಗಿದ್ದು. ಅಧಿಕಾರಾವಧಿ ಐದು ವರ್ಷದ ವರೆಗೆ ಇರಲಿದೆ ಎಂದು ಚುನಾವಣಾಧಿಕಾರಿ ಎಚ್.ಸುರೇಶ ಪ್ರಮಾಣ ಪತ್ರ ನೀಡಿ ಪ್ರಕಟಿಸಿದರು.

ನಂತರ ನೂತನ ಅಧ್ಯಕ್ಷರಾದ ಬಾವಿಕಟ್ಟಿ ಶಿವಾನಂದ ಮಾತನಾಡಿ  ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸುತ್ತೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಪ್ರಮುಖರಾದ ಬಾಚಿನಳ್ಳಿ ಗುರುಬಸವರಾಜ್‌, ಭಾವಿಕಟ್ಟಿ ಗುರುಬಸಪ್ಪ, ಬಾರಿಕರ ಮರಿಗೋಣಪ್ಪ, ಜವಳಿ ರಾಜಣ್ಣ, ಶಿವಕುಮಾರ್, ಲಾರಿ ಗುರುಬಸವರಾಜ್‌ ಹಾಗೂ ಸಂಘದ ಕಾರ್ಯದರ್ಶಿ ಹರೀಶ ಇತರರಿದ್ದರು.

Leave a Reply

Your email address will not be published. Required fields are marked *