
ಹಂಪಿ : ಗುರುವಾರ ಜಯಚಾಮರಾಜೇಂದ್ರ ದೃಶ್ಯಕಲಾ ಕಾಲೇಜ್ ಮೈಸೂರು ಚಿತ್ರಕಲಾ ವಿದ್ಯಾರ್ಥಿಗಳಿಂದ ಅರಳಿದ ಹಂಪಿಯ ಕಲ್ಲಿನ ರಥ, ಹಂಪಿಯೋ ಕಲೆ ಮತ್ತು ಸಂಸ್ಕೃತಿಗೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ತನ್ನ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯಿಂದ ಪ್ರವಾಸಿಗರನ್ನು, ಸಂಶೋಧಕರನ್ನು, ವಿದ್ಯಾರ್ಥಿಗಳನ್ನು, ಕಲೆ ಮತ್ತು ವಾಸ್ತುಶಿಲ್ಪದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ, ಹಂಪಿಯ ಸೊಬಗನ್ನು ಇಲ್ಲಿನ ಶ್ರೀಮಂತಿಕೆಯನ್ನು ಆನಂದಿಸುವುದೇ ಒಂದು ಸ್ವರ್ಗ, ಹಂಪಿಯ ವಿಜಯ ವಿಠಲ ದೇವಸ್ಥಾನದಲ್ಲಿ ಚಿತ್ರಕಲಾ ಮತ್ತು ಸೋಪ್ ಆರ್ಟ್ ವಿದ್ಯಾರ್ಥಿಗಳು ತಮ್ಮ ಕುಂಚದಲ್ಲಿ ಅದ್ಭುತ ಚಿತ್ರಗಳನ್ನು ಅರಳಿಸಿದ್ದಾರೆ.

ಹಂಪಿಯು ಸಂಶೋಧಕರ ಸ್ವರ್ಗವಾಗಿದ್ದು, ಇಲ್ಲಿಗೆ ನಾನಾ ರೀತಿ, ಬೇರೆ ಬೇರೆ ಅಭಿರುಚಿ ಹೊಂದಿರುವಂತ ಪ್ರವಾಸಿಗರು ಮತ್ತು ಸಂಶೋಧಕರ ಹಾಗೂ ವಿದ್ಯಾರ್ಥಿಗಳು ಬರುತ್ತಾರೆ, ಹಂಪಿಯ ನೈಸರ್ಗಿಕ, ಪಕ್ಷಿ ಮತ್ತು ಪ್ರಾಣಿಗಳ ವೀಕ್ಷಣೆ, ಹಿಡನ್ ಪ್ಲೇಸ್ ಎಕ್ಸ್ಪ್ಲೋರ್, ಕಲೆ ಮತ್ತು ವಾಸ್ತು ಶಿಲ್ಪ ಹೀಗೆ ಹಂಪಿಗೆ ಭೇಟಿ ನೀಡುತ್ತಾರೆ, ವರ್ಷದಲ್ಲಿ ಬೆಂಗಳೂರು, ಮೈಸೂರು ಮತ್ತು ಮಹಾರಾಷ್ಟ್ರದ ಪುನಃ ಆರ್ಟ್ ಅಂಡ್ ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಹಂಪಿಗೆ ಬಂದು ತಮ್ಮ ಕುಂಚದಿಂದ ಚಿತ್ರಕಲೆ, ಸಾಬೂನು ಕಲೆ ಬಗ್ಗೆ ಅಧ್ಯಯನ ಮಾಡಲು ಬರುತ್ತಾರೆ. ಈ ಸಂದರ್ಭದಲ್ಲಿ ಹಂಪಿಯ ವಿರುಪಾಕ್ಷಿ ವಿ ಹಂಪಿ ರಾಜ್ಯ ಪ್ರವಾಸಿ ಮಾರ್ಗದರ್ಶಿ, ಹಂಪಿ ಉಪಸ್ಥಿತರಿದ್ದರು.