ಹಸಿರು ಹೊನಲು ತಂಡದಿಂದ ಸರ್ಕಾರಿ ಶಾಲೆಗಳ ಹೊರಗೋಡೆಗೆ ವರ್ಲಿ ಚಿತ್ರಕಲೆಯ ಚಿತ್ತಾರದ ಮೆರಗು

Loading

ಅಂದದ ಶಾಲೆಗಾಗಿ ಇಂದಿನಿಂದ ಶೀರ್ಷಿಕೆಯಡಿಯಲ್ಲಿ

ಕೊಟ್ಟೂರು : ಪಟ್ಟಣದಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು, ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಕೊಂಡು ಸಾರ್ವಜನಿಕರಲ್ಲಿ ಮೆಚ್ಚುಗೆ ಪಡೆದಿರುವ ಹಸಿರು ಹೊನಲು ತಂಡ ಈಗ ಹೊಸ ಪ್ರಯೋಗವನ್ನು ಮಾಡಿದೆ. ಅದರ ಅಂಗವಾಗಿ ಹೊಸ ಕೊಡಿಹಳ್ಳಿ ಸರ್ಕಾರಿ ಶಾಲೆಗಳ ಹೊರ ಗೋಡೆಗಳಿಗೆ ವರ್ಲಿ ಚಿತ್ರಕಲೆ ಕಲೆ ಬೊಂಬೆ , ಇತರೇ ಚಿತ್ರಗಳನ್ನು ಬರೆಯುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಪಟ್ಟಣ, ಗ್ರಾಮಿಣ ಹಳ್ಳಿಗಳ ,ಸರ್ಕಾರಿ ಶಾಲೆಗಳು ಎಂದರೆ ತಾತ್ಸಾರದಿಂದ ನೋಡುವ ಕಾಲಘಟ್ಟದಲ್ಲಿ, ಮಕ್ಕಳ ಮನಸ್ಸನ್ನು ಸೆಳೆಯುವ ರೀತಿ ಚಿತ್ತಾರಗಳನ್ನು ಗೋಡೆಯ ಮೇಲೆ ಬರೆದು, ಸರ್ಕಾರಿ ಶಾಲೆ ಏನೂ ಕಡಿಮೆ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಗೋಡೆಗಳ ಮೇಲೆ ಬರೆದಿರುವ ಅಂದವಾಗಿ ಬರೆದಿರುವ ರೇಖಾಚಿತ್ರಗಳು ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗುವಂತಹ ಈ ರೀತಿಯ ಕೆಲಸಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಾಮಾಜಿಕ ಕೆಲಸಗಳನ್ನು ಮಾಡುವ ತಂಡಗಳು ಊರಿಗೆ ಒಂದೇ ಒಂದು ಇದ್ದರೂ ಸಾಕು ಆ ಊರು ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಸಿರು ಹೊನಲು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರ ಹೊಸ ಹೊಸ ಚಿಂತನೆಗಳು ಮುನ್ನುಡಿ ಬರೆಯಲಿದ್ದಾರೆ.

ಇವರ  ಹಾದಿಯಲ್ಲಿ  ಸಾಮಾಜಿಕ ಕಳಕಳಿಯಿಂದ ನೆಡಯಲಿಕ್ಕೆ  ಹಳೆ ಕೊಟ್ಟೂರು ಸೇವಾ ಟ್ರಸ್ಟ್ ಉದಯಿಸುವುದಕ್ಕೆ ಕಾರಣಭೂತರು ತಪ್ಪಾಗಲಾರದು.

ಈ  ಕಾರ್ಯದಲ್ಲಿ ಬಂಜಾರ ನಾಗರಾಜ್ ,ದೇವರಮನಿ ಸಿದ್ದೇಶ್,ಬಿ ಆರ್ ವಿಕ್ರಂ, ನಾಗರಾಜ್, ಅಜಯ್, ಪ್ರಶಾಂತ್, ಮಲ್ಲಿಕಾರ್ಜುನ್,ಮಂಡಕ್ಕಿ ಪ್ರಕಾಶ್, ತಗ್ಗಿನಕೇರಿ ಕೊಟ್ರೇಶ್, ಕವೀಂದ್ರ ರಾಜ್, ಯಲ್ಲೇಶ್, ಕುಟುಂಬದ ಪುಟಾಣಿ ಮಕ್ಕಳು, ಹಸಿರು ಹೊನಲು ಮಹಿಳಾ ಬಳಗಮತ್ತು ಹಳೆ ಕೊಟ್ಟೂರು ಸಂಸ್ಥಾಪಕರಾದ ವಿಜಯ ಕುಮಾರ್ ಹಟ್ಟಿ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಭಾಗವಹಿಸಿದ್ದರು.

ಕೊಟ್ -1

ಪಟ್ಟಣ, ಗ್ರಾಮಿಣ ಪ್ರದೇಶದ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿರುವಂತಹ ಸರ್ಕಾರಿ ಶಾಲೆಗಳಿಗೆ ಪ್ರತಿಯೊಬ್ಬರು ಸಾಮಾಜಿಕ ಕಳಕಳೆಯಿಂದ ಸಹಕಾರಿಯಾಗಿರಬೇಕೆಂದು. ಹಸಿರು ಹೊನಲು ತಂಡದ ಬಿ ಆರ್ ವಿಕ್ರಂ ಹೇಳಿದರು

Leave a Reply

Your email address will not be published. Required fields are marked *