
ಬಳ್ಳಾರಿ : ಜಿಲ್ಲೆ ಯ ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್ಲು ರೈಲ್ವೇ ಸ್ಟೇಷನ್ ಗೆ ಸೇರಿದ ಸರ್ವೆ ನಂಬರ್ 321(ಎ2) (ಎ3) ನ 8.5 ಎಕರೆ ಜಾಗದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸಬೇಕು ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚನೆ ನೀಡಲಾಗಿದೆ.
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಲ್ಲಿ ನೆಲೆಸಿರುವ 800 ಕುಟುಂಬಗಳು, 2,000 ಮಂದಿಗೆ ಯಾವುದೇ ತೊಂದರೆ ಆಗಬಾರದು. ನ್ಯಾಯಬದ್ಧವಾದ ಕಾನೂನು ಹೋರಾಟ ಮುಂದುವರೆಸಬೇಕು ಎಂದು ಸೂಚನೆ ನೀಡಲಾಗಿದೆ.

- ಶನಿವಾರ ತೋರಣಗಲ್ಲು ರೈಲ್ವೇ ಸ್ಟೇಷನ್ ಗೆ ಸೇರಿದ ಜಾಗದ ವಿಚಾರದ ಬಗ್ಗೆ ಸಚಿವರಾದ ಸಂತೋಷ್ ಲಾಡ್, ಸಂಸದರಾದ ಈ.ತುಕಾರಾಮ್, ಸಚಿವರಾದ ಜಮೀರ್ ಅಹ್ಮದ್ ನೇತೃತ್ವದ ನಿಯೋಗದ ಜೊತೆ ಸಮಾಲೋಚನೆ ನಡೆಸಿ, ಬಳಿಕ ಮಾತನಾಡಿದೆ.