ಶಿವ ಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ ಮತ್ತು ಕಾರ್ತೀಕ ರಂಗ ಸಂಭ್ರಮ 2024

Loading

ಹಗರಿಬೊಮ್ಮನಹಳ್ಳಿ : ಪಟ್ಟಣದ ನೀರಾವರಿ ಇಲಾಖೆಯ ಆಂಜನೇಯ ಸ್ವಾಮಿ ದೇಗುಲದ 33ನೇ ವರ್ಷದ ಕಾರ್ತಿಕೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ರಂಗ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವೀನ್ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಈ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪತ್ರಿಕೆಯ ಪ್ರಕಟಣೆ ಹೇಳಿಕೆ ನೀಡಿ ಮಾತನಾಡಿದರು ಸಾಣೆ ಹಳ್ಳಿ ಮಠದ ಶಿವ ಸಂಚಾರ ತಂಡದಿಂದ ಡಿ.04 ರಂದು ಡಾ. ಬಿ ಆರ್ ಪೊಲೀಸ್ ರಚನೆಯ ತುಲಾಭಾರ. ಡಿ.05ಕ್ಕೆ ಗಣೇಶ್ ಅಮೀನಗಡ ಅವರ ಬಂಗಾರದ ಮನುಷ್ಯ, ಡಿ.06 ರಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಕೋಳೂರು ಕೊಡಗೂಸು, ಎಂಬ ಮೂರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಡಿ.07ರ ರಾತ್ರಿ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿರುತ್ತಾರೆ. ನವೀನ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಕೇಶವ ರೆಡ್ಡಿ, ಉಪಾಧ್ಯಕ್ಷ ಎಚ್ ಎಂ. ನಾಗರಾಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ನಿವೃತ್ತ ಯೋಧ ರಾಮರೆಡ್ಡಿ ಇದ್ದರು.

Leave a Reply

Your email address will not be published. Required fields are marked *