
ಹಗರಿಬೊಮ್ಮನಹಳ್ಳಿ : ತಾಲೂಕು ತಂಬ್ರಹಳ್ಳಿ ಗ್ರಾಮವು ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಯಥೇಚ್ಛವಾಗಿ ನಡೆಯುತ್ತಿದೆ. ಈ ವ್ಯಾಪ್ತಿಯ ಹಳ್ಳಿಗಳಲ್ಲಿ ಕೃಷಿಯನ್ನೇ ಅವಲಂಭಿಸಿರುವ ಜನರು ತಮ್ಮ ವಿದ್ಯುತ್ನ್ನೇ ನಂಬಿರುತ್ತಾರೆ. ಕೃಷಿ ಚಟುವಟಿಕೆಗೆ ಪೂರಕವಾಗಿ ವಿದ್ಯುತ್ ಒದಗಿಸಲು ತಂಬ್ರಹಳ್ಳಿ ಗ್ರಾಮದಲ್ಲಿ ಈಗ 2+12.5 ಎಂಎಎ, 66/11 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸದರಿ ಕೇಂದ್ರದಲ್ಲಿ ಹಾಲಿ ಇರುವ ವಿದ್ಯುತ್ ಪರಿರ್ವಕದಿಂದ ಮುಂದಿನ ಬೇಸಿಗೆ ಅವಧಿಯಲ್ಲಿ ರೈತರಿಗೆ ವಿದ್ಯುತ್ ಒದಗಿಸಲು ಸಾಧ್ಯವಿರುವುದಿಲ್ಲ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಲಬುರಗಿ ಕಛೇರಿಯಿಂದ ತಂಬ್ರಹಳ್ಳಿ ಗ್ರಾಮಕ್ಕೆ ಸುಮಾರು ರೂ.953.35 ಲಕ್ಷಗಳ ಡಿ.ಪಿ.ಆರ್. ತಯಾರಿಸಿ ತಾಂತ್ರಿಕ ಅನುಮೋದನೆ ನೀಡಿ ಮಂಜೂರಾತಿಗಾಗಿ ಬೆಂಗಳೂರು ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಸಹ ನಮಗೆ ಹರ್ಷದಾಯಕವಾಗಿದೆ. ಸದರಿ ಪ್ರಸ್ತಾವನೆಗೆ ಕೂಡಲೇ ಬೆಂಗಳೂರು ಕಛೇರಿಯಿಂದ ಅನುಮೋದನೆ ಪಡೆದು 2/20 ಎಂವಿಎ, 110/11 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವನ್ನು ಶೀಘ್ರದಲ್ಲಿ ಅಳವಡಿಸಿ ಬೇಸಿಗೆಯಲ್ಲಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು

ಇಂದು TB Dam ಮುನಿರಾಬಾದ್ ನ Superintendent engineer KPTCL ಶ್ರೀ ಬಸವರಾಜ ಹೆಚ್ ಎಸ್ ರವರನ್ನು ತಂಬ್ರಹಳ್ಳಿಯ ರೈತರು ಅಕ್ಕಿ ತೋಟೇಶ್ ರವರ ನೇತೃತ್ವ ದಲ್ಲಿ ಸಬ್ ಸ್ಟೇಷನ್ KPTCL Thambrahalli ಯಲ್ಲಿರುವ 12.5 ಎಂವಿಎ ಟ್ರಾನ್ಸ್ಫಾರ್ಮರ್ ರನ್ನು ತೆಗೆದು 20 MVA ಟ್ರಾನ್ಸ್ಫಾಮರ್ ರನ್ನು ಆಳವಡಿಸಲು ಮನವಿ ಕೊಡಲಾಯಿತು.